ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ದೇಶಕ್ಕಾಗಿ ಕೆಲಸ ಮಾಡುತ್ತಿರುವುದು ಸುಲಭವಾದ ಕೆಲಸವಲ್ಲ ಎಂದು ಹೇಳಿದ್ದಾರೆ.
ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯ ಈ ಮಾತನ್ನು ಹೇಳಿದ್ದಾರೆ. ದೇಶದ ಜನರಿಗಾಗಿ ಪ್ರಧಾನಿ ಮೋದಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಉತ್ತರಪ್ರದೇಶದಿಂದ ನಿಮ್ಮ ರಾಜಕೀಯ ಕೆರಿಯರ್ ಆರಂಭ ಮಾಡ್ತಿರಾ ಎಂದು ಕೇಳಲಾದ ಪ್ರಶ್ನೆಗೆ ಈ ವೇಳೆ ಪ್ರತಿಕ್ರಿಯೆ ನೀಡಿರುವ ಅವರು.
'ನಾನು ಉತ್ತಮ ತಾಯಿಯಾಗಿದ್ದೇನೆ, ಮಗಳಾಗಿದ್ದೇನೆ ಅಲ್ಲದೇ ಉತ್ತಮ ಹೆಂಡತಿಯಾಗಿದ್ದೇನೆ ದೇಶದ ನಾನೊಬ್ಬಳು ದೇಶದ ಜವಾಬ್ದಾರಿಯುತ ನಾಗರೀಕಳಾಗಿದ್ದೇನೆ. ಅಭಿಷೇಕ್ ಬಚ್ಚನ್ರನ್ನು ಮದುವೆಯಾದ ಐಶ್ವರ್ಯ ರೈ ತಾವು ರಾಜಕೀಯಕ್ಕೆ ಎಂಟ್ರಿ ನೀಡುವುದಿಲ್ಲ' ಎಂದು ತಿಳಿಸಿದ್ದಾರೆ. ಇನ್ನೂ ಐಶ್ವರ್ಯ ರೈ ಅಭಿನಯದ ಮುಂಬರುವ ಚಿತ್ರ ಸರಬ್ಜಿತ್ ಚಿತ್ರ ಮೇ 20ಕ್ಕೆ ರಿಲೀಸ್ ಆಗಲಿದೆ.
ಇನ್ನೂ ಸರಬ್ಜಿತ ಚಿತ್ರದ ಮುಖ್ಯ ಪಾತ್ರದಲ್ಲಿ ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಅವರ ಕಾಂಬಿನೇಷನ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇವರರಿಬ್ಬರ ನಟನೆ ನಿಜಕ್ಕೂ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ.
ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ ಕಥಾ ವಸ್ತು ಅದ್ಭೂತವಾಗಿ ಹೆಣಯಲಾಗಿದೆ. ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಮನ ಮುಟ್ಟುವಂತೆ ಮಾಡುತ್ತವೆ. ಇನ್ನೂ ಚಿತ್ರದ ಹೊಸ ಹಾಡು 'ದರ್ದ' ಉತ್ತಮವಾಗಿ ಮೂಡಿ ಬಂದಿದೆ.