Webdunia - Bharat's app for daily news and videos

Install App

ಆರಾಧ್ಯ ವಿಚಾರವಾಗಿ ಐಶ್ವರ್ಯಾ-ಅಭಿಷೇಷ್ ಕಿತ್ತಾಟ?

Webdunia
ಭಾನುವಾರ, 5 ಮಾರ್ಚ್ 2017 (10:21 IST)
ಮಕ್ಕಳ ವಿಚಾರವಾಗಿ ತಂದೆ ತಾಯಿ ಕಿತ್ತಾಡುವುದು ಎಲ್ಲಾ ಕುಟುಂಬಗಳಲ್ಲೂ ಸಹಜವಾಗಿ ನಡೆಯುವ ಘಟನೆ. ಇದಕ್ಕೆ ಬಾಲಿವುಡ್ ಸಹ ಹೊರತಲ್ಲ. ತಮ್ಮ ಪುತ್ರಿ ಆರಾಧ್ಯ ವಿಚಾರವಾಗಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಕಿತ್ತಾಡಿರುವ ಘಟನೆ ನಡೆದಿದೆ. 
 
ಈ ಹಿಂದೊಮ್ಮೆ ’ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ರಣಬೀರ್ ಕಪೂರ್ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಕ್ಕೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಐಶ್ ಮತ್ತು ಅಭಿ, ಆ ರೀತಿ ಏನಿಲ್ಲ. ವೃತ್ತಿಸಂಬಂಧಿ ವಿಚಾರಗಳಲ್ಲಿ ತಲೆ ಹಾಕಲ್ಲ. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದರು.
 
ಅದಾದ ಬಳಿಕ ಈಗ ಆರಾಧ್ಯ ವಿಚಾರವಾಗಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾಲನಟಿಯಾಗಿ ಆರಾಧ್ಯರನ್ನು ಚಿತ್ರರಂಗಕ್ಕೆ ಪರಿಚಯಿಸಬೇಕೆಂಬುದು ಅಭಿಷೇಕ್ ಬಚ್ಚನ್ ಆಸೆ. ಈಗಲೇ ಚಿತ್ರರಂಗಕ್ಕೆ ಅಡಿಯಿಟ್ಟರೆ ಮುಂದೆ ತನ್ನ ಮಗಳು ದೊಡ್ಡ ಸ್ಟಾರ್ ಆಗುತ್ತಾಳೆ ಎಂಬ ಬಯಕೆ ಅಭಿಷೇಕ್ ಅಭಿಮತ.
 
ಆದರೆ ತನ್ನ ಮಗಳು ಈಗಲೇ ಬೆಳ್ಳಿಪರದೆಗೆ ಅಡಿಯಿಡುವುದು ಐಶ್ವರ್ಯಾ ರೈಗೆ ಸುತಾರಾಂ ಇಷ್ಟವಿಲ್ಲ. ಸ್ವಲ್ಪ ದಿನಗಳ ಮಟ್ಟಿಗೆ ಆರಾಧ್ಯಳನ್ನು ಕ್ಯಾಮೆರಾ ಮುಂದೆ ತರುವುದು ಬೇಡ ಎಂಬುದು ಅವರ ಬಯಕೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ, ಕಿತ್ತಾಟ ಆಗಿದೆ ಎನ್ನುತ್ತಿವೆ ಬಾಲಿವುಡ್ ಮೂಲಗಳು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments