Webdunia - Bharat's app for daily news and videos

Install App

ಹೆಣ್ಣುಮಕ್ಕಳನ್ನು ಹಿಂಸೆ ಮಾಡದಿರಿ...ಅವರಿಗೆ ಬದುಕಲು ಅವಕಾಶ ನೀಡಿ-ಅಮೀರ್ ಖಾನ್

Webdunia
ಮಂಗಳವಾರ, 11 ಫೆಬ್ರವರಿ 2014 (09:41 IST)
PR
ಅಮೀರ್ ಖಾನ್ ಕೇವಲ ರೀಲ್ ಹೀರೋ ಮಾತ್ರವಲ್ಲ ರಿಯಲ್ ಹೀರೋ ಸಹ ಆಗಿದ್ದಾರೆ, ಆದಷ್ಟು ತಮ್ಮನ್ನು ಸಮಾಜಹಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವತ್ತ ಆದ್ಯತೆ ನೀಡುತ್ತಾರೆ ಈ ನಟ. ಕಿರುತೆರೆಯಲ್ಲಿ ಪ್ರಸಾರವಾದ ಸತ್ಯಮೇವ ಜಯತೆ ರಿಯಾಲಿಟಿ ಷೋ ಸಮಾಜದ ಅನೇಕ ಬಗೆಯ ಸಮಸ್ಯೆಗಳನ್ನು ಎತ್ತಿ ತೋರಿತು. ಸಮಾಜದಲ್ಲಿ ನಡೆಯುತ್ತಿರುವ ಅನೇಕ ರೀತಿಯ ಅಕ್ರಮಗಳ ಬಗ್ಗೆ ತಿಳಿಸಿತ್ತು. ಮುಖ್ಯವಾಗಿ ಇದು ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಅಮೀರ್ ಖಾನ್ ಸಮಾಜಕ್ಕೆ , ಪ್ರಕೃತಿಗೆ ಅಹಿತ ಅನ್ನಿಸುವ ಜಾಹೀರಾತುಗಳಲ್ಲಿ ಇನ್ನು ಮುಂದೆ ನಟಿಸ ಬಾರದು ಎನ್ನುವ ನಿರ್ಣಯಕ್ಕೆ ಬಂದಿದ್ದಾರೆ. ಈಗ ಒನ್ ಬಿಲಿಯನ್ ರೈಸಿಂಗ್ ಮೊವ್ಮೆಂಟ್ ಕಾರ್ಯಕ್ರಮಕ್ಕೆ ಆದ್ಯತೆ ನೀಡಲು ಮುಂದಾಗಿದ್ದಾರೆ.

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ , ಹಿಂಸೆಯಂತಹ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಳೆದ ವರ್ಷ ನಡೆದಂತೆ ಈ ವರ್ಷ ಫೆಬ್ರವರಿ ಹದಿನಾಲ್ಕರಂದು ಈ ಕಾರ್ಯಕ್ರಮ ನಡೆಯುತ್ತದೆ.ಕಳೆದ ವರ್ಷ ಈ ಕಾರ್ಯಕ್ರಮದಲ್ಲಿ 193 ದೇಶಗಳಿಗೆ ಸೇರಿದವರು ಭಾಗವಹಿಸಿದ್ದರು. ತಮಗೆ ಇಷ್ಟ ಬಂದಂತೆ ಹಾಡುತ್ತ, ಡ್ಯಾನ್ಸ್ ಮಾಡುತ್ತಾ ಖುಷಿಯಾಗಿ ಭಾವಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಸಂಗತಿ ಆಗಿದೆ. ಈ ಬಾರಿ ಅಮೀರ್ ಖಾನ್ ಸ್ತ್ರೀಯರನ್ನು ಗೌರವಿಸಿ, ಹಿಂಸೆಯನ್ನು ಬಿಟ್ಟು ಬಿಡಿ ಎನ್ನುವ ಹಿತವಚನ ನೀಡುವಂತಹ ವೀಡಿಯೋವನ್ನು ಅಂದು ಅರ್ಪಿಸುತ್ತಿದ್ದಾರೆ ಅಮೀರ್. ಆ ಮೂವ್ ಮೆಂಟ್ ನಲ್ಲಿ ಸ್ತ್ರೀ ಪುರುಷರೆನ್ನದೇ ಎಲ್ಲರು ಭಾಗವಹಿಸಿ ಎನ್ನುವ ಕರೆ ನೀಡಿದ್ದಾರೆ ಅಮೀರ್.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ