ಹೃತಿಕ್ ಮತ್ತು ಸುಸಾನ ವಿಚ್ಛೇದನಕ್ಕೆ ಕಾರಣ ನಾನಲ್ಲ-ಅರ್ಜುನ್ ರಾಂ ಪಾಲ್
, ಬುಧವಾರ, 18 ಡಿಸೆಂಬರ್ 2013 (11:36 IST)
ಹೃತಿಕ್ ಮತ್ತು ಸುಸಾನ ವಿಚ್ಛೇದನಕ್ಕೆ ನಾನು ಕಾರಣವಲ್ಲ ಎಂದಿದ್ದಾರೆ ಅರ್ಜುನ್ ರಾಂಪಾಲ್.ಸುಸಾನ ಮತ್ತು ಹೃತಿಕ್ ರೋಶನ್ ವಿಚ್ಛೇದನದ ಸಂಗತಿಯಿಂದ ತನಗೆ ತುಂಬಾ ಬೇಸರವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿ ಮನಕ್ಕೆ ಹೆಚ್ಚು ಖೇದ ಉಂಟು ಮಾಡಿದೆ ಎಂದು ಹೇಳಿದ್ದಾರೆ ನಟ, ನಿರ್ದೇಶಕ ಅರ್ಜುನ್ ರಾಂ ಪಾಲ್.ಹೃತಿಕ್ ಸಂಸಾರದಲ್ಲಿ ಬಿರುಗಾಳಿ ಏಳಲು ಅರ್ಜುನ್ ರಾಂಪಾಲ್ ಸಹ ಕಾರಣವಾಗಿದ್ದಾರೆ ಎನ್ನುವ ಸುದ್ದಿ ಎಲ್ಲರನ್ನೂ ತಲ್ಲಣಗೊಳಿಸಿತ್ತು. ರಾಮ್ ಪಾಲ್ ಮತ್ತು ಸುಸಾನ ನಡುವೆ ಬೆಳೆಯುತ್ತಿರುವ ಸ್ನೇಹವೇ ಇಂತಹ ಘಟನೆಗೆ ಕಾರಣ ಎನ್ನುವ ಸುದ್ದಿ ಸಹ ಹೆಚ್ಚು ಪ್ರಭಾವಶಾಲಿಯಾಗಿ ಹರಿದಾಡಿತ್ತು. ನಾನು ಮತ್ತು ಮೆಹರ್ ಸದಾ ಈ ಜೋಡಿ ಒಂದಾಗಿ ಬದುಕಲಿ ಎಂದೇ ಆಶಿಸಿದ್ದು. ಅವರ ಬದುಕನ್ನು ಸರಿಪಡಿಸುವುದಾಗಿತ್ತು ನಮ್ಮ ಉದ್ದೇಶ.ಆದರೇ ನನ್ನ ಬಗ್ಗೆ ಬಂದ ಊಹಾಪೋಹಗಳಿಂದ ಮನಕ್ಕೆ ತುಂಬಾ ನೋವಾಗಿದೆ. ಸ್ನೇಹಿತರ ಕುಟುಂಬಗಳು ಹಾಳಾಗಲಿ ಎಂದು ಯಾರೂ ಬಯಸಲ್ಲ ಎಂದು ಬೇಸರದಿಂದ ಹೇಳಿದ್ದಾರೆ. ಇಬ್ಬರು ಗೆಳೆಯರು ಇಂತಹ ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ನಾವು ಸಹ ತುಂಬಾ ಎಚ್ಚರಿಕೆಯಿಂದ ಅದನ್ನು ಬಗೆಹರಿಸುವತ್ತ ಗಮನ ನೀಡ ಬೇಕಾಗುತ್ತದೆ. ಇದು ಬದುಕಿನ ಪ್ರಶ್ನೆ. ಆದರೆ ಇದನ್ನೆ ಕೆಟ್ಟದಾಗಿ ಹೇಳುವುದು ಅತ್ಯಂತ ಕೆಟ್ಟದ್ದು ಎಂದು ಹೇಳಿದ್ದಾರೆ ರಾಮ್ ಪಾಲ್ 2000
ರಲ್ಲಿ ಮದುವೆಯಾದ ಹೃತಿಕ್ ಮತ್ತು ಸುಸಾನ್ ಕಳೆದ 13 ವರ್ಷಗಳಿಂದ ದಾಂಪತ್ಯ ಬದುಕಿನ ರಥ ಎಳೆಯುತ್ತಿದ್ದರು.ಸುಮಾರು 17 ವರ್ಷಗಳ ಸ್ನೇಹಕ್ಕೆ ಅವರಿಬ್ಬರು ವಿಚ್ಛೇದನದ ಮೂಲಕ ಕೊನೆ ಹಾಡಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.