Webdunia - Bharat's app for daily news and videos

Install App

ಸ್ತ್ರೀ ದೇವತೆಗಳನ್ನು ಪೂಜಿಸುವ ಪುರುಷರು ತಮ್ಮ ಹೆಣ್ಣುಮಕ್ಕಳನ್ನೇ ಕೊಲ್ಲುತ್ತಿದ್ದಾರೆ-ಕಾಜೋಲ್

Webdunia
ಸೋಮವಾರ, 9 ಡಿಸೆಂಬರ್ 2013 (12:53 IST)
PR
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ. ಅವರ ಬೆಳವಣಿಗೆ ಸ್ವಾತಂತ್ರಕ್ಕೆ, ಪುರಷ ಅಡ್ಡಿ ಆಗುತ್ತಿದ್ದಾನೆ. ಮಹಿಳೆ ಆಧುನಿಕವಾಗಿ ಬದುಕಲು ಪುರುಷ ಅವಕಾಶ ಮಾಡಿಕೊಡುತ್ತಿಲ್ಲ. ಈಗ ಗಂಡಸು ತನ್ನ ಮೈಂಡ್ ಸೆಟ್ ಬದಲಾಯಿಸಿಕೊಳ್ಳ ಬೇಕು ಎಂದು ಹೇಳಿರುವವರು ಬೇರೆ ಯಾರೂ ಅಲ್ಲ ಬಾಲಿವುಡ್ ಎವರ್ ಗ್ರೀನ್ ನಟಿ ಕಾಜೋಲ್.ಆಕೆ ಕಳೆದವಾರ ದೆಹಲಿಯಲ್ಲಿ ವೊಡಾಫೋನ್ ಫೌಂಡೇಷನ್ ಸಂಸ್ಥೆ ಅವರ 'ವುಮೆನ್ ಆಫ್ ಪ್ಯೂರ್ ವಂಡರ್' ಪುಸ್ತಕ ಬಿಡುಗಡೆ ಮಾಡಿದ ಸಮಯದಲ್ಲಿ ಈ ಮಾತುಗಳನ್ನು ಹೇಳಿದರು. ಸಾಮಾನ್ಯವಾಗಿ ಮಹಿಳೆ ಪ್ರತಿಯೊಂದನ್ನು ಹೋರಾಟ ಮಾಡಿ ಪಡೆಯಬೇಕಾಗಿದೆ. ಆದರೂ ಆಕೆಗೆ ಸುಲಭವಾಗಿ ಗೆಲುವು ಸಿಗದು.

ಪುರುಷನ ಪರಿಸ್ಥಿತಿ ಇಲ್ಲಿ ತುಂಬಾ ಭಿನ್ನ. ಆತನಿಗೆ ಸುಲಭವಾಗಿ ಗೆಲುವು ದೊರಕುತ್ತದೆ.ಯಶಸ್ಸಿಗಾಗಿ ಸ್ತ್ರೀ ದೇವತೆಗಳನ್ನು ಪೂಜಿಸುವ ಗಂಡಸರು ತಮ್ಮ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದಾರೆ. ಮಹಿಳೆಯರು ಸ್ವಾಲಂಬಿಗಳಾಗಬೇಕಾದರೆ ಮೊದಲು ಪುರುಷರ ಧೋರಣೆ ಬದಲಾಗ ಬೇಕು ಸ್ಥಳೀಯ ಪೊಲೀಸ್
ಠಾಣೆಗಳ ಕಾರ್ಯವೈಖರಿ-ವಾತಾವರಣದತ್ತಲೂ ಗಮನ ನೀಡುವುದು ಅತ್ಯಗತ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು. ಅನೇಕ ಸಮಯಗಳಲ್ಲಿ ಪೊಲೀಸರು ಕೇಸ್ ಫೈಲ್ ಮಾಡಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ಈ ಸಮಯದಲ್ಲಿ ಆರೋಪ ಮಾಡಿದ್ದು ಕಾಜೋಲ್. 60 ಮಂದಿ ಹೆಣ್ಣುಮಕ್ಕಳ ಅಪರೂಪದ ಹೋರಾಟ ಅಂತಿಮವಾಗಿ ಅವರು ಗಳಿಸಿದ ಗೆಲುವಿನ ವಿವರಗಳನ್ನು ವುಮನ್ ಆಫ್ ಪ್ಯೂರ್ ವಂಡರ್ ಪುಸ್ತಕ ಹೊಂದಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?