Select Your Language

Notifications

webdunia
webdunia
webdunia
webdunia

ಸಂಜಯ್‌ ನಿಟ್ಟುಸಿರು

ಸಂಜಯ್‌ ನಿಟ್ಟುಸಿರು
ಮುಂಬೈ , ಶುಕ್ರವಾರ, 28 ಸೆಪ್ಟಂಬರ್ 2007 (16:05 IST)
IFM
ಬಹುಶಃ ಗಣಪತಿ ಬಾಪ್ಪಾಗೆ ಸಂಜಯ್ ದತ್ ಪ್ರಾರ್ಥನೆ ಕೇಳಿಸಿರಬಹುದು. ಏಕೆಂದರೆ ಸಂಜು ಬಾಬಾ ಅಲಿಯಾಸ್ ಮುನ್ನಾಬಾಯ್ ಇನ್ನೊಂದು ತಿಂಗಳು ಸರಾಗವಾಗಿ ಉಸಿರಾಡಬಹುದು.

1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ದತ್‌ಗೆ ನೀಡಬೇಕಾಗಿದ್ದ ತೀರ್ಪಿನ ಪ್ರತಿಯನ್ನು ಅಕ್ಟೋಬರ್ ಕೊನೆಗೆ ಮುಂದೂಡಲಾಗಿದೆ. ತೀರ್ಪಿನ ಮೊದಲ ಪ್ರತಿ ಅ.15ರಂದು ನಿರೀಕ್ಷಿಸಲಾಗಿದ್ದು, ತೀರ್ಪು ಜಾರಿಯಾದರೆ ಸಂಜಯ್ "ಬ್ಯಾಕ್ ಟು ಯೆರವಾಡ ಜೈಲ್".

ತಮ್ಮ ತಾತ್ಕಾಲಿಕ ಬಿಡುಗಡೆ ಅವಧಿಯಲ್ಲಿ ಸಂಜಯ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಧಮಾಲ್ ಅವರ ಇತ್ತೀಚಿನ ಚಿತ್ರ, ತಮ್ಮದೇ ಚಿತ್ರನಿರ್ಮಾಣ ಸಂಸ್ಥೆ ಸ್ಥಾಪನೆಗೆ ಮತ್ತು ದತ್ ಕುಟುಂಬದ ಬಗ್ಗೆ ಪುಸ್ತಕ ಬಿಡುಗಡೆಗೂ ಸಂಜಯ್ ಯೋಜಿಸಿದ್ದಾರಂತೆ.

Share this Story:

Follow Webdunia kannada