Webdunia - Bharat's app for daily news and videos

Install App

ರಕ್ತ ಚರಿತ್ರ: ಪ್ರತಿಭಟನೆ, ಪ್ರತಿಕೃತಿ ದಹನ, ದಾಂಧಲೆ, ಗಲಭೆ

Webdunia
ಸೋಮವಾರ, 25 ಅಕ್ಟೋಬರ್ 2010 (16:00 IST)
ಕನ್ನಡ ನಟ ಸುದೀಪ್ ಕೂಡ ಸಣ್ಣದೊಂದು ಪಾತ್ರ ಮಾಡಿರುವ ರಾಮ್ ಗೋಪಾಲ್ ವರ್ಮಾ ಅವರ 'ರಕ್ತ ಚರಿತ್ರ' ಆಂಧ್ರದಾದ್ಯಂತ ಕಿಚ್ಚನ್ನು ಹಬ್ಬಿಸಿದ್ದು, ತೆಲುಗು ದೇಶಂ ಕಾರ್ಯಕರ್ತರು ಹಾಗೂ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಚಿತ್ರದ ಬಗ್ಗೆ ಈಗಾಗಲೇ ವಿಭಿನ್ನ ಪ್ರತಿಕ್ರಿಯೆ ಬಂದಿದ್ದು ತೀವ್ರ ಪ್ರತಿಭಟನೆಗೆ ಗ್ರಾಸವಾಗಿದೆ. ಅಲ್ಲಲ್ಲಿ ವರ್ಮಾ ಪ್ರತಿಕೃತಿ ದಹನ, ದಾಂದಲೆ, ಗಲಭೆ ಸೃಷ್ಟಿಯಾಗಿದೆ.
PR

ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಕಟುವಾಗಿ ಟೀಕಿಸಿದ್ದಾರೆ. ಓಬುಳರೆಡ್ಡಿ ಹತ್ಯೆ ಎನ್.ಟಿ. ರಾಮಾರಾವ್ ಮುಖ್ಯಮಂತ್ರಿಯಾಗುವ ಮುನ್ನವೇ ನಡೆದದ್ದು, ಇದು ವರ್ಮಗೆ ತಿಳಿದಿಲ್ಲ. ಇಂತಹ ಸೂಕ್ಷ್ಮ ಪಾತ್ರಗಳನ್ನು ಸೃಷ್ಟಿಸುವಾಗ ಸಲಹೆ ಪಡೆಯಬೇಕಿತ್ತು. ಅಲ್ಲದೆ ಎನ್‌ಟಿಆರ್ ಜನತೆಯ ಪ್ರೀತಿ ಹಾಗೂ ಹಿತವನ್ನು ಬಯಸಿದವರು. ಹತ್ಯೆ, ದ್ವೇಷವನ್ನು ಎಂದೂ ಪೋಷಿಸಿಲ್ಲ. ರಕ್ತ ಚರಿತ್ರ ಬರೀ ಸಿನೆಮಾ ಆಗದೆ ರಾಜಕೀಯ ಚರಿತ್ರವಾಗಿದೆ ಎಂದು ಕಿಡಿಕಾರಿದ್ದಾರೆ.

ಲಕ್ಷ್ಮೀ ಪಾರ್ವತಿ ಪ್ರತಿಕ್ರಿಯಿಸಿ ತಮ್ಮ ಪತಿ ಎನ್‌ಟಿಆರ್ ಅವರ ಘನತೆಗೆ ಚಿತ್ರದಲ್ಲಿ ಮಸಿ ಬಳಿಯಲಾಗಿದ್ದು, ಪಾತ್ರವನ್ನು ನೆಗೆಟಿವ್ ಆಗಿ ಬಿಂಬಿಸಿದ್ದಾರೆ. ಆದ್ದರಿಂದ ವರ್ಮಾ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಲು ಯೋಚಿಸಿದ್ದಾರೆ.

ಈಗಾಗಲೆ, ತೆಲುಗು ದೇಶಂನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಂಧ್ರದ ಹಲವಾರು ಚಿತ್ರಮಂದಿರಗಳ ಬಳಿ ವರ್ಮ ಹಾಗೂ ಚಿತ್ರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಕೃತಿ ದಹನ ಮಾಡಿ ಚಿತ್ರವನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ವರ್ಮಾ ಪ್ರತಿಕ್ರಿಯೆ: ಮಾಜಿ ಮುಖ್ಯಮಂತ್ರಿ ಎನ್‌ಟಿಆರ್ ಅವರ ಘನತೆಗೆ ಧಕ್ಕೆ ಬರುವಂತಹ ಯಾವುದೇ ಸನ್ನಿವೇಶವಿದ್ದರೂ ಅದನ್ನು ತೆಗೆದು ಹಾಕುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಒಮ್ಮೆ ಎನ್‌ಟಿಆರ್ ಕುಟುಂಬದವರು ಚಿತ್ರ ನೋಡಿ ತಿಳಿಸಬೇಕೆಂದು ಕೇಳಿಕೊಂಡಿದ್ದಾರೆ.

ಶಾಸಕರೊಡನೆ ಸುದೀಪ್: ಬೆಂಗಳೂರಿನ ಕೋರಮಂಗಲದ ಪಿವಿಆರ್‌ನಲ್ಲಿ ತನ್ನ ಕುಟುಂಬದೊಡನೆ ಚಿತ್ರ ವೀಕ್ಷಿಸಿದ ಕಿಚ್ಚ ಸುದೀಪ್ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ. ಇವರ ಜೊತೆಯಲ್ಲಿ ಕರ್ನಾಟಕದ ಗಡಿ ಭಾಗದ ಶಾಸಕರು ಕೂಡ ಸಿನಿಮಾ ನೋಡಿ ಸಂತಸಪಟ್ಟಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದರೆ 'ರಕ್ತ ಚರಿತ್ರ ಭಾಗ-2' ನವೆಂಬರ್ 19ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments