ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಂದೆ ಶಂಕರ ಆರ್ ದೀಕ್ಷಿತ್ ಅವರು ದೀರ್ಘಕಾಲದ ಅಸ್ವಾಸ್ಥ್ಯದ ಬಳಿಕ ಶುಕ್ರವಾರ ಬೆಳಗ್ಗೆ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಶಂಕರ ದೀಕ್ಷಿತ್ ಅವರು ಕೊನೆಯುಸಿರೆಳೆದಾಗ ಅವರ ಕುಟುಂಬದ ಸದಸ್ಯರೆಲ್ಲರೂ ಅವರ ಪಕ್ಕದಲ್ಲಿ ಇದ್ದರು.
' ನಾವು ಅವರನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಪೂರ್ಣ ಪ್ರಮಾಣದ ಬದುಕು ನಡೆಸಿದ್ದರು ಎಂಬುದರ ಅರಿವು ನಮಗಿದೆ. ಶೋಕ ಸಂದೇಶ ಹಾಗೂ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ' ಎಂದು ಮಾಧುರಿ ದೀಕ್ಷಿತ್ ಹೇಳಿಕೆಯಲ್ಲಿ ತಿಳಿಸಿದರು.
' ಝಲಕ್ ದಿಖ್ಲಾ ಜಾ' ನೃತ್ಯ ರಿಯಾಲಿಟಿ ಶೋ ತೀರ್ಪುಗಾರರ ಕಾರ್ಯವನ್ನು ಮಾಧುರಿ ದೀಕ್ಷಿತ್ ಅವರು ಪ್ರಸ್ತುತ ನಿಭಾಯಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ರಿಯಾಲಿಟಿ ಶೋ ಅಂತಿಮಗೊಳ್ಳಲಿದೆ.