Webdunia - Bharat's app for daily news and videos

Install App

ನಟಿಯ ಪ್ರತಿಭೆಗಿಂತ ಸೌಂದರ್ಯಕ್ಕೆ ದಕ್ಷಿಣದಲ್ಲಿ ಪ್ರಾಮುಖ್ಯತೆ- ಶ್ರೀಯ

Webdunia
ಶುಕ್ರವಾರ, 14 ಮಾರ್ಚ್ 2014 (10:07 IST)
PR
ಟಾಲಿವುಡ್ ನ್ನು ಆಳಿದ ನಟಿ ಮಣಿಯರಲ್ಲಿ ಶ್ರೀಯ ಸಹ ಒಬ್ಬಾಕೆ. ಆಕೆ ಇತ್ತೀಚಿಗೆ ಅದ್ಯಾಕೋ ಅಲ್ಲಿನ ನಿರ್ದೇಶಕರ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ತನ್ನ ಮನದ ಕೋಪವನ್ನು ಸಿಕ್ಕಾಪಟ್ಟೆ ಹೊರಗೆ ಹಾಕುತ್ತಿದ್ದಾಳೆ ಆ ಚೆಲುವೆ.ಹಿಂದೆ ತನಗೆ ನಟನೆ ಬರದೆ ಇದ್ದರು, ತಾನು ಕೆಟ್ಟದಾಗಿ ಅಭಿನಯಿಸಿದರು ಸಹ ಬಿಡದೆ ತಮ್ಮ ಚಿತ್ರಗಳಲ್ಲಿ ನನಗೆ ಅವಕಾಶ ನೀಡುತ್ತಿದ್ದರು. ಬಿಡದೆ ತನ್ನ ಹಿಂದೆ ಬಂದು ನಟಿಸುವಂತೆ ಕೇಳುತ್ತಿದ್ದರು.

ಆದರೆ ಈಗ ಗ್ಲಿಜರಿನ್ ಇಲ್ಲದೆ ಅಳ್ತೀನಿ, ನಟಿಯಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ, ಅಭಿನಯದ ವಿಷಯಕ್ಕೆ ಬೇಕಾಗಿರುವ ಅನೇಕ ಎಚ್ಚರಿಕೆಗಳನ್ನು ಪಡೆದಿದ್ದೇನೆ. ಆದರೆ ಈಗ ಅವಕಾಶಗಳು ಸಿಗುತ್ತಿರುವ ಪ್ರಮಾಣ ತುಂಬಾ ಕಡಿಮೆ.

ತಾವು ಎಷ್ಟು ನಟಿಯೊಬ್ಬಳ ಸೌಂದರ್ಯ ತೋರಿಸಲು ಸಾಧ್ಯವೋ ಅಷ್ಟು ತೋರಿಸುವ ನಿರ್ದೇಶಕರುಗಳಿಗೆ ಆಕೆಯ ನಟನೆಯ ಬಗ್ಗೆ ಆದ್ಯತೆ ಇರುವುದಿಲ್ಲ. ಅದರಲ್ಲೂ ಇಪ್ಪತ್ತೈದು ವರ್ಷಗಳು ಪೂರ್ಣ ಆಗಿದ್ದರೆ ಆಕೆಯನ್ನು ಗಮನಿಸುವುದೇ ಇಲ್ಲ.

PR
ಅದೇ ಹಾಲಿವುಡ್ ಚಿತ್ರಗಳಲ್ಲಿ ನಲವತ್ತೈದು ವರ್ಷ ಆಗಿದ್ದರು ಹೀರೋಯಿನ್ ಆಗಲು ಅವಕಾಶ ಇರುತ್ತದೆ. ಬಾಲಿವುಡ್ ನಲ್ಲಿ ಮುವ್ವತ್ತೈದು ಪೂರ್ಣ ಆಗಿರುವ ಅನೇಕ ಹೀರೋಯಿನ್ ಗಳು ಚಾಲ್ತಿಯಲ್ಲಿ ಇದ್ದಾರೆ.

ಆದರೆ ಸೌತ್ನಲ್ಲಿ ಮಾತ್ರ ಅತಿ ಕಿರಿಯ ವಯಸ್ಸಿಗೆ ಮಾತ್ರ ಅವಕಾಶ ನೀಡ್ತಾರೆ ಅನ್ನೋದೇ ವಿಷಾದಕರ ಸಂಗತಿ ಎಂದಿದ್ದಾಳೆ.. ! ಈಗ ನಾಗಾರ್ಜುನ ಅವರ ಮನಂ ಚಿತ್ರದಲ್ಲಿ ಅವಕಾಶ ಪಡೆದಿರುವ ಶ್ರಿಯಳನ್ನು ದಕ್ಷಿಣದವರು ಗುರುತಿಸುತ್ತಾರಾ.. ನೋಡುವ ಕಾದು !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments