Webdunia - Bharat's app for daily news and videos

Install App

ಕೈ ತಪ್ಪಿ ಹೋದ ಹಳೆಯ ಅವಕಾಶಗಳ ಬಗ್ಗೆ ಎಳ್ಳಷ್ಟು ಬೇಸರವಿಲ್ಲ .. ಕರೀನಾ ಕಪೂರ್

Webdunia
ಬುಧವಾರ, 19 ಮಾರ್ಚ್ 2014 (10:14 IST)
PR
PR
ಸೌಂದರ್ಯ, ಅಭಿನಯಿಸುವ ಸಾಮರ್ಥ್ಯ ಎರಡನ್ನು ಹೊಂದಿದ್ದರು ಕರೀನಾ ಕಪೂರ್ ಗೆ ಅದೃಷ್ಟ ಕೈ ಕೊಟ್ಟಿದೆ. ಈಗ ಆಕೆಯ ಗಮನ ಶುದ್ಧಿ ಮತ್ತು ಬಾಂಬೆ ಸಮುರಾಯ್ ಕಡೆಗೆ! ಆಕೆ ಬೇಡ ಎಂದು ಬಿಟ್ಟಿದ್ದ ಕ್ವೀನ್, ರಾಮ್ ಲೀಲ, ಚೆನ್ನೈ ಎಕ್ಸ್ ಪ್ರೆಸ್ , ಫ್ಯಾಶನ್,ಬ್ಲಾಕ್ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆದಿತ್ತು. ತಾನು ಅಂತಹ ಅವಕಾಶಗಳನ್ನು ಬಿಟ್ಟಿದ್ದಕ್ಕೆ ಆಕೆಗೆ ಕಸಿವಿಸಿ ಎದುರಾಗಿದೆ ಎಂದೇ ಹೇಳ ಬಹುದು!

ಆದರೆ ಮಾಧ್ಯಮದ ಮುಂದೆ ಮಾತ್ರ ತನ್ನ ಪ್ಲೇಟ್ ಬದಲಾಯಿಸಿದ್ದಾಳೆ ಈ ಚೆಲುವೆ. ಕೆರಿಯರ್ ನಲ್ಲಿ ಇಂತಹ ಅಂಶಗಳು ಸಾಮಾನ್ಯ. ಆ ಸಿನಿಮಾಗಳಲ್ಲಿ ನಟಿಸದೆ ಇರುವುದಕ್ಕೆ ಯಾವುದೇ ರೀತಿಯಲ್ಲೂ ನೋವಿಲ್ಲ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ.

ಶುದ್ಧಿಯಲ್ಲಿ ಫರಾನ್ ಅಕ್ತರ್, ಬಾಂಬೆ ಸಮುರಾಯ್ ಚಿತ್ರದಲ್ಲಿ ಹೃತಿಕ್ ರೋಶನ್ ಜೊತೆ ನಟಿಸ ಬೇಕಿದೆ ಈ ಚೆಲುವೆ. ಆದರೆ ಹೃತಿಕ್ ಆರೋಗ್ಯದಲ್ಲಿ ಏರುಪೇರಾದ ಕಾರಣ ಈ ಚಿತ್ರವೂ ಸದ್ಯಕ್ಕೆ ಕೆಲಸ ಮಾಡುತ್ತಿಲ್ಲ.

PR
ಆದರೆ ಆರೋಗ್ಯ ಸರಿ ಆಗುವಷ್ಟು ಕಾಲ ಕಾಯುವ ತಾಳ್ಮೆ ಇಲ್ಲದೆ ಈಕೆ ಚಿತ್ರದಿಂದ ಹೊರ ಬಿದ್ದಿದ್ದಾಳೆ. ಅಲ್ಲದೆ ಬಾಂಬೆ ಸಮುರಾಯ್ ಚಿತ್ರವನ್ನು ನಿರ್ಮಿಸುತ್ತಿರುವ ಎಕ್ಸೆಲ್ ಸಂಸ್ಥೆಯು ಶಾರುಖ್ ಸಿನಿಮಾದ ನಿರ್ಮಾಣದತ್ತ ಮಗ್ನವಾಗಿದೆ. ಈ ಕಾರಣದಿಂದ ಆ ಚಿತ್ರದ ಮುಂದುವರಿಕೆಯು ಸಹ ಸದ್ಯಕ್ಕೆ ಇಲ್ಲ.

ಸೆಪ್ಟಂಬರ್ ನಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಹೆಚ್ಚಾಗಿದೆ. ಶುದ್ಧಿಯಿಂದ ಹೊರಗೆ ಬಂದ ಕಾರಣ ಅದರ ಬಗ್ಗೆ ಯಾವುದೇ ಬಗೆಯ ಮಾತು ಹೇಳಲು ತಾನು ಸಿದ್ಧ ಇಲ್ಲ. ಬಿಟ್ಟು ಬಂದಿರುವ ಪ್ರಾಜೆಕ್ಟ್ ಗಳ ಬಗ್ಗೆ ಹೆಚ್ಚು ಮಾತನಾಡಲಾರೆ ಎಂದು ಹೇಳಿದ್ದಾಳೆ ಆ ಚೆಲುವೆ. ಇವೆಲ್ಲದರ ನಡುವೆ ಆಕೆಗೆ ಸಿಂಗಂ 2 ರಲ್ಲಿ ಅವಕಾಶ ದೊರಕಿದೆ. ಇದರ ಶೂಟಿಂಗ್ ಇದೆ ತಿಂಗಳು 25ರಿಂದ ಆರಂಭ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments