Webdunia - Bharat's app for daily news and videos

Install App

ಕರೀನಾ ಕಪೂರ್ ಖಾನ್ ಕ್ಷಮೆ ಯಾಚಿಸ ಬೇಕು ಎಂದಿರುವ ಸೂರ್ಯ ಫ್ಯಾನ್ಸ್

Webdunia
ಶನಿವಾರ, 12 ಏಪ್ರಿಲ್ 2014 (09:53 IST)
PR
ಇತ್ತೀಚೆಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಅತ್ಯಂತ ಪ್ರತಿಭಾವಂತ ನಟ ಸೂರ್ಯ ಅಂಜಾನ್ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ ಹರಡಿತ್ತು. ಆ ಚಿತ್ರದಲ್ಲಿ ನಿರ್ದೇಶಕ ಮುರುಗದಾಸ್ ವಿಶೇಷ ಹಾಡಿಗೆ ನಟಿಸಲೆಂದು ಬಾಲಿವುಡ್ ನಟಿ ಕರೀನ ಕಪೂರ್ ಅವರನ್ನು ಕರೆತರುತ್ತಾರೆ. ಈ ಮುಖಾಂತರ ಆಕೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಇದು ತುಂಬಾ ಜೋರಾಗಿ ಎಲ್ಲೆಡೆ ಹರಿದಾಡಿತು.

ಆದರೇ, ಅದರ ಬಗ್ಗೆ ಕರೀನ ಕಪೂರ್ ಖಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ತನಗೆ ಸೂರ್ಯ ಯಾರು ಅನ್ನುವುದೇ ಗೊತ್ತಿಲ್ಲ ಎನ್ನುವ ಮಾತನ್ನು ಎಲುಬಿಲ್ಲದ ನಾಲಿಗೆ ಮುಖಾಂತರ ಆಡಿ ತೋರಿದ್ದಳು. ದಕ್ಷಿಣ ಭಾರತದ ಬಗ್ಗೆ ಆಕೆಗೆ ಇರುವ ದೃಷ್ಟಿ ಕೋನ, ಸೂರ್ಯ ಅವರ ಬಗ್ಗೆ ಹೇಳಿದ ಪರಿ ಎಲ್ಲವೂ ಸೂರ್ಯಾಭಿಮಾನಿಗಳಿಗೆ ಸಿಟ್ಟು ತರಿಸಿದೆ. ಇದರಿಂದ ಕುಪಿತರಾದ ಅವರು ತಮ್ಮ ಕೆಂಗಣ್ಣು ಆಕೆ ಮೇಲೆ ಬಿಟ್ಟಿದ್ದಾರೆ.

ನನಗೆ ಸೂರ್ಯ, ಲಿಂಗು ಸ್ವಾಮಿ ಯಾರೂ ಅಂತಾನೆ ಗೊತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಳು. ನನಗೆ ಮೇಲಿರುವ ಹಾಲಿವುಡ್, ಕೆಳಗಿರುವ ದಕ್ಷಿಣ ಭಾರತದ ಭಾಷೆಗಳಲ್ಲಿ ನಟಿಸುವ ಯಾವ ಆಸಕ್ತಿ ಇಲ್ಲ ಎಂದು ಹೇಳಿದ್ದಳು ಸಂದರ್ಶನದಲ್ಲಿ.

PR

ಈ ಮುಖಾಂತರ ಆಕೆ ದಕ್ಷಿಣದವರ ಬಗ್ಗೆ ಕೊಬ್ಬಿನ ಮಾತುಗಳನ್ನು ಆಡಿ ತನ್ನಲ್ಲಿ ಅಡಗಿರುವ ಕೆಟ್ಟತನ ತೋರಿದ್ದಳು. ಹಾಗೆ ನೋಡಿದರೆ ಕರೀನ ತಮಿಳು ಚಿತ್ರದಲ್ಲಿ ನಟಿಸುವ ಸುದ್ದಿ ಎಪ್ರಿಲ್ 1 ರ ಜೋಕ್ ಆಗಿತ್ತು. ಅದನ್ನು ಅನೇಕ ಪ್ರಸಿದ್ಧ ಮಾಧ್ಯಮ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ಬರೆದ ಕಾರಣ ಇದು ಕಾಳ್ಗಿಚ್ಚಿನಂತೆ ಎಲ್ಲಡೆ ವ್ಯಾಪಿಸಿತ್ತು.

ಕರೀನ ಲೂಸ್ ಟಾಕ್ ನಿಂದ ಸಿಟ್ಟಾಗಿರುವ ಸೂರ್ಯ ಅವರ ಫ್ಯಾನ್ ಗಳು ಆಕೆ ಕ್ಷಮೆ ಯಾಚಿಸುವಂತೆ ಆಗ್ರಹಿಸುತ್ತಿದ್ದಾರೆ. ದಕ್ಷಿಣ ಭಾರತದ ಅಡಿಪಾಯ ಇಲ್ಲದೆ ಇದ್ರೆ ಉತ್ರ ಭಾರತಕ್ಕೆ ಬೆಲೆ ಎಲ್ಲಿದೆ? ಅದೇ ರೀತಿ ದಕ್ಷಿಣದ ಕಲಾವಿದರು, ತಂತ್ರಜ್ಞರು ಆಳುತ್ತಿರುವ ಬಾಲಿವುಡ್ ಅವರೇ ಇಲ್ಲದೆ ಹೋಗಿದ್ರೆ ಇಷ್ಟು ಖ್ಯಾತಿ ಪಡೆಯಲು ಸಾಧ್ಯ ಆಗುತ್ತಿತ್ತಾ ಎನ್ನುವ ಬಗ್ಗೆ ತಿಳಿದುಕೊಂಡಿದ್ದಿದ್ದರೆ ಕರೀನ ಕಪೂರ್ ಖಾನ್ ಅನ್ನುವ ನಟಿ ಹೀಗೆ ಮಾತಾಡ್ತಾ ಇರಲಿಲ್ಲ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

Show comments