ಈ ಮುಖಾಂತರ ಆಕೆ ದಕ್ಷಿಣದವರ ಬಗ್ಗೆ ಕೊಬ್ಬಿನ ಮಾತುಗಳನ್ನು ಆಡಿ ತನ್ನಲ್ಲಿ ಅಡಗಿರುವ ಕೆಟ್ಟತನ ತೋರಿದ್ದಳು. ಹಾಗೆ ನೋಡಿದರೆ ಕರೀನ ತಮಿಳು ಚಿತ್ರದಲ್ಲಿ ನಟಿಸುವ ಸುದ್ದಿ ಎಪ್ರಿಲ್ 1 ರ ಜೋಕ್ ಆಗಿತ್ತು. ಅದನ್ನು ಅನೇಕ ಪ್ರಸಿದ್ಧ ಮಾಧ್ಯಮ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ಬರೆದ ಕಾರಣ ಇದು ಕಾಳ್ಗಿಚ್ಚಿನಂತೆ ಎಲ್ಲಡೆ ವ್ಯಾಪಿಸಿತ್ತು.
ಕರೀನ ಲೂಸ್ ಟಾಕ್ ನಿಂದ ಸಿಟ್ಟಾಗಿರುವ ಸೂರ್ಯ ಅವರ ಫ್ಯಾನ್ ಗಳು ಆಕೆ ಕ್ಷಮೆ ಯಾಚಿಸುವಂತೆ ಆಗ್ರಹಿಸುತ್ತಿದ್ದಾರೆ. ದಕ್ಷಿಣ ಭಾರತದ ಅಡಿಪಾಯ ಇಲ್ಲದೆ ಇದ್ರೆ ಉತ್ರ ಭಾರತಕ್ಕೆ ಬೆಲೆ ಎಲ್ಲಿದೆ? ಅದೇ ರೀತಿ ದಕ್ಷಿಣದ ಕಲಾವಿದರು, ತಂತ್ರಜ್ಞರು ಆಳುತ್ತಿರುವ ಬಾಲಿವುಡ್ ಅವರೇ ಇಲ್ಲದೆ ಹೋಗಿದ್ರೆ ಇಷ್ಟು ಖ್ಯಾತಿ ಪಡೆಯಲು ಸಾಧ್ಯ ಆಗುತ್ತಿತ್ತಾ ಎನ್ನುವ ಬಗ್ಗೆ ತಿಳಿದುಕೊಂಡಿದ್ದಿದ್ದರೆ ಕರೀನ ಕಪೂರ್ ಖಾನ್ ಅನ್ನುವ ನಟಿ ಹೀಗೆ ಮಾತಾಡ್ತಾ ಇರಲಿಲ್ಲ.