ಈರುಳ್ಳಿ ಬೆಳ್ಳುಳ್ಳಿ ವರ್ಜ್ಯ ಯಾಕೆ?

Webdunia
ಭಾನುವಾರ, 5 ಮಾರ್ಚ್ 2017 (09:14 IST)
ಸಾಂಪ್ರದಾಯಿಕ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ವರ್ಜ್ಯ. ಯಾಕೆ?


ಮನೆಯಲ್ಲಿ ಹಬ್ಬ-ಹರಿದಿನ, ಪೂಜೆ, ಹವನ ಮುಂತಾದ ದೇವತಾಕಾರ್ಯಗಳಿರುವಾಗ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಅದಕ್ಕೊಂದು ಪೌರಾಣಿಕ ಹಿನ್ನಲೆಯಿದೆ.

ಸಮುದ್ರ ಮಥನದ ನಂತರ ಮೋಹಿನಿಯ ವೇಷ ಧರಿಸಿ ವಿಷ್ಣು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ. ಅದನ್ನು ಅರಿತ ರಾಹು ಕೇತುವೆಂಬ ರಾಕ್ಷಸರು ಅಮೃತವನ್ನು ಸ್ವೀಕರಿಸಲು ಬರುತ್ತಾರೆ. ಪ್ರಮಾದದಿಂದ ವಿಷ್ಣು ಅವರಿಗೂ ಅಮೃತ ಹಂಚುತ್ತಾನೆ. ತಕ್ಷಣದಲ್ಲೇ ಸೂರ್ಯ ಹಾಗೂ ಚಂದ್ರರು ಮಹಾವಿಷ್ಣುವಿಗೆ ಮಾಹಿತಿ ನೀಡುತ್ತಾರೆ.

ಅಷ್ಟರಲ್ಲಿ ಅವರಿಬ್ಬರಿಗೂ ಅಮೃತ ಕುಡಿದಾಗಿರುತ್ತದೆ. ಆದರೆ ಗಂಟಲಿನಿಂದ ಇಳಿದಿರುವುದಿಲ್ಲ. ಕೂಡಲೇ ಮಹಾವಿಷ್ಣು ಅವರಿಬ್ಬರ ತಲೆ ಕಡಿಯುತ್ತಾನೆ. ಆದರೆ ತಲೆ ನಾಶವಾಗುವುದಿಲ್ಲ. ದೇಹಾಂತ್ಯವಾಗುತ್ತದೆ. ಹೀಗಾಗಿ ಇವರಿಬ್ಬರಿಗೂ ಶಿರವಿಲ್ಲ. ಅವರ ಶಿರ ಕತ್ತರಿಸುವಾಗ ಅವರ ಬಾಯಲ್ಲಿದ್ದ ಅಮೃತ ಬಿಂದುವಿನಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹುಟ್ಟಿಕೊಂಡವು.

ಹೀಗಾಗಿ ಇವೆರಡು ಪದಾರ್ಥಗಳಿಗೆ ಅಮೃತದಂತೆ ಹಲವು ರೋಗಗಳನ್ನು ನಿವಾರಿಸುವ ಗುಣವಿದೆ. ಆದರೆ ರಾಕ್ಷಸರ ಎಂಜಲು ತಾಗಿದ್ದರಿಂದ ದುರ್ವಾಸನೆ ಹೊಂದಿದೆ. ಹೀಗಾಗಿ ಇವೆರಡೂ ಶುಭ ಕಾರ್ಯಗಳಲ್ಲಿ ವರ್ಜ್ಯವಾಗಿದೆ. ಇದನ್ನು ತಾಮಸ ಆಹಾರ ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments