ಮನೆಯೊಳಗೆ ಉಗುರು ತೆಗೆಯಬಾರದು ಯಾಕೆ?

Webdunia
ಶನಿವಾರ, 6 ಮೇ 2017 (07:42 IST)
ಬೆಂಗಳೂರು: ಕ್ಷೌರ ಮಾಡುವ ಹಾಗೆ ವಾರಕ್ಕೊಮ್ಮೆಯಾದರೂ ಉಗುರು ತೆಗೆಯಲೇಬೇಕು. ಉಗುರು ಎಲ್ಲಿ ತೆಗೆಯಬೇಕು ಎನ್ನುವುದಕ್ಕೂ ನಿಯಮವಿದೆ.


ಮನೆಯೊಳಗೆ, ನಡೆದಾಡುವ ದಾರಿಯಲ್ಲಿ ಮತ್ತು ರಾತ್ರಿ ವೇಳೆ ಉಗುರು ತೆಗೆಯಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಅದಕ್ಕೆ ಧಾರ್ಮಿಕ ಕಾರಣ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ.

ಮನೆಯೊಳಗೆ ಉಗುರು ತೆಗೆಯುವುದು ಅಶುಭ ಎನ್ನಲಾಗುತ್ತದೆ. ನಮ್ಮ ಉಗುರಿನ ಮೇಲೆ ಬೇರೆಯವರು ನಡೆದಾಡಿದರೆ, ಅದರಿಂದ ಅವರು ನಮ್ಮ ಶತ್ರುಗಳಾಗುತ್ತಾರೆ ಎಂಬ ಮೂಢನಂಬಿಕೆಯಿದೆ.

ಅದೆಲ್ಲಕ್ಕಿಂತ ಹೆಚ್ಚು ಮನೆ ಲಕ್ಷ್ಮಿಯ ಆವಾಸಸ್ಥಾನ ಎಂಬುದು ನಂಬಿಕೆ. ಅಂತಹ ಲಕ್ಷ್ಮಿ ಇರುವ ಸ್ಥಳದಲ್ಲಿ ರಾತ್ರಿ ವೇಳೆ ಉಗುರು ತೆಗೆದು ಅಶುಭ ಮಾಡಬಾರದು ಎಂದು ನಂಬಲಾಗುತ್ತದೆ.

ಅದಕ್ಕಿಂತ ಮುಖ್ಯವಾಗಿ ಸಿಕ್ಕ ಸಿಕ್ಕಲ್ಲಿ ಉಗುರು ಬಿಸಾಕುವುದರಿಂದ ಅದು ಆಹಾರದ ಮೂಲಕ ಉದರ ತಲುಪುವ ಸಾಧ್ಯತೆಯಿರುತ್ತದೆ. ಉಗುರು ಜೀರ್ಣವಾಗುವ ವಸ್ತುವಲ್ಲ. ಹಾಗಾಗಿ ಅದು ನಮ್ಮ ಆಹಾರ ಸೇರದಂತೆ ತಡೆಯಲು ಮನೆಯಿಂದ ಹೊರಗೆ ಉಗುರು ತೆಗೆಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments