Maha Shivaratri special: ಬಿಲ್ವ ಪತ್ರೆ ಅಥವಾ ಕಾಯಿಯನ್ನು ಮುರಿಯಬಾರದು

Krishnaveni K
ಗುರುವಾರ, 7 ಮಾರ್ಚ್ 2024 (08:40 IST)
Photo Courtesy: Social Media
ಬೆಂಗಳೂರು: ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ಹೂ ಎಂದರೆ ಅದು ಬಿಲ್ವಪತ್ರೆ. ಬಿಲ್ವ ಮರವನ್ನು ಹಿಂದೂಗಳು ಅಷ್ಟೇ ಪೂಜ್ಯನೀಯ ಭಾವದಲ್ಲಿ ನೋಡುತ್ತಾರೆ. ಶಿವರಾತ್ರಿ ಸಂದರ್ಭದಲ್ಲಿ ಬಿಲ್ವ ಪತ್ರೆ ಕಾಯಿ ಮತ್ತು ಟೊಂಗೆಯನ್ನು ಮುರಿಯಬಾರದು ಯಾಕೆ ಎಂದು ನೋಡೋಣ.

ಬಿಲ್ವ ಪತ್ರೆಯ ಸೊಪ್ಪು ಮತ್ತು ಫಲದಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂದು ಅಯುರ್ವೇದವೇ ಹೇಳುತ್ತದೆ. ಇದನ್ನು ಬಳಸಿ ಆಯುರ್ವೇದದಲ್ಲಿ ಅನೇಕ ಔಷಧಿ ತಯಾರಿಸಲಾಗುತ್ತದೆ. ಎಷ್ಟೋ ಸಾಮಾನ್ಯ ರೋಗಗಳಿಗೆ ಬಿಲ್ವ ಪತ್ರೆ ಔಷಧಿಯಾಗಿ ಬಳಕೆಯಾಗುತ್ತದೆ. ಈ ಸೊಪ್ಪಿಗೆ ಶಿವನ ಆಶೀರ್ವಾದವಿದೆ ಎಂಬುದಕ್ಕೆ ಇದೇ ಸಾಕ್ಷಿ.

ಸಾಮಾನ್ಯವಾಗಿ ನಾವು ಮೂರು ಎಲೆಗಳಿರುವ ಬಿಲ್ವ ಪತ್ರೆಯನ್ನು ಪೂಜೆಗೆ ಬಳಸುತ್ತೇವೆ. ಆದರೆ ಮರದಲ್ಲಿ ಬಿಡುವ ಕಾಯಿಯಲ್ಲೂ ಅನೇಕ ವಿಶೇಷತೆಗಳಿವೆ. ಬಿಲ್ವ ಮರದ ಫಲದಲ್ಲಿ ಮೂರು ಕಣ್ಣುಗಳನ್ನು ನೋಡಬಹುದು. ಇದು ಶಿವನ ಮೂರು ಕಣ್ಣುಗಳನ್ನು ಸೂಚಿಸುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.

ಈ ಹಣ್ಣನ್ನು ಮತ್ತು ಇದರ ಟೊಂಗೆಯನ್ನು ನಾವು ವಿನೋದಕ್ಕಾಗಿ ಮುರಿಯುವುದು ಮಾಡಬಾರದು. ಯಾಕೆಂದರೆ ಇದರಲ್ಲಿ ಸ್ವತಃ ಶಿವನ ಅಂಶವಿದೆ ಎಂದೇ ನಂಬಲಾಗುತ್ತದೆ. ಇದರ ಮರಕ್ಕೆ ಅಥವಾ ಫಲಕ್ಕೆ ಹಾನಿ ಮಾಡುವುದು ಶಿವನಿಗೆ ಅಪಮಾನ ಮಾಡಿದಂತೆ. ಹೀಗಾಗಿ ಇದನ್ನು ಮುರಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಔಷಧಿಯ ಹೊರತಾಗಿ ಅನಗತ್ಯವಾಗಿ ಬಿಲ್ವ ಮರದ ಟೊಂಗೆ ಅಥವಾ ಕಾಯಿಯನ್ನು ಮುರಿಯಲು ಹೋಗಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಜ್ಯೋತಿಷ್ಯ ಪ್ರಕಾರ ಚಂದ್ರಗ್ರಹಣ ಸಮಯದಲ್ಲಿ ಹೋಳಿ ಆಡಬಹುದೇ

ಶಿವರಾತ್ರಿಗೆ ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಮುಂದಿನ ಸುದ್ದಿ
Show comments