Webdunia - Bharat's app for daily news and videos

Install App

ಇಂದು ಹನುಮಾನ್ ಜಯಂತಿ: ಹನುಮಂತನ ಜನನ ಹೇಗಾಯ್ತು ಗೊತ್ತಾ?

Webdunia
ಗುರುವಾರ, 20 ಡಿಸೆಂಬರ್ 2018 (09:19 IST)
ಬೆಂಗಳೂರು: ಇಂದು ನಾಡಿನೆಲ್ಲೆಡೆ ಭಕ್ತಿಯಿಂದ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ರಾಮ ಬಂಟ ಹನುಮನ ಜನನ ಹೇಗಾಯ್ತು ಎಂಬ ಕತೆ ಗೊತ್ತಿಲ್ಲದೇ ಇದ್ದರೆ ಇದನ್ನು ಓದಿ.


ಅಂಗಿರ ಎಂಬ ಮುನಿ ಒಮ್ಮೆ ಇಂದ್ರ ದೇವನ ಆಸ್ಥಾನಕ್ಕೆ ಬರುತ್ತಾನೆ. ತನ್ನ ಆಸ್ಥಾನಕ್ಕೆ ಬಂದ ಮುನಿಗೆ ಇಂದ್ರ ಪುಂಜಿಕ್ಸತಲ ಎಂಬ ನೃತ್ಯಗಾತಿಯಿಂದ ನೃತ್ಯ ಮಾಡಿಸಿ ಸಂತೋಷ ಪಡಿಸಲು ಯತ್ನಿಸುತ್ತಾನೆ. ಆದರೆ ಇದರ ಬಗ್ಗೆ ಆಸಕ್ತಿಯೇ ಇರದ ಅಂಗಿರ ಮುನಿ ನೃತ್ಯದ ಬಗ್ಗೆ ಏನೂ ಹೇಳದೇ ಮೌನವಾಗಿದ್ದಾಗ ಇಂದ್ರ ಮತ್ತು ನೃತ್ಯಗಾತಿಗೆ ಅವಮಾನವಾದಂತಾಗುತ್ತದೆ. ಹೀಗಾಗಿ ನೃತ್ಯಗಾತಿ ಮುನಿಗೆ ಅವಮಾನ ಮಾಡಲು ಮುಂದಾಗುತ್ತಾಳೆ.

ಇದರಿಂದ ಕೋಪಗೊಂಡ ಮುನಿ ಅಂಗಿರ ನೃತ್ಯಗಾತಿಗೆ ಮುಂದಿನ ಜನ್ಮದಲ್ಲಿ ನೀನು ಹೆಣ್ಣು ಮಂಗನಾಗಿ ಭೂ ಲೋಕದಲ್ಲಿ ಜನಿಸುವಂತಾಗಲಿ’ ಎಂದು ಶಾಪ ನೀಡುತ್ತಾನೆ. ಆಗ ಭಯಗೊಂಡ ನೃತ್ಯಗಾತಿ ಮುನಿಯ ಕಾಲಿಗೆ ಬಿದ್ದು ಕ್ಷಮೆ ನೀಡುವಂತೆ ಯಾಚಿಸುತ್ತಾಳೆ. ಆಗ ಅಂಗಿರ ಮುನಿ ‘ನಿನಗೆ ದೈವಾಂಶ ಸಂಭೂತನಾದ, ಪರಮಾತ್ಮನ ಸೇವಕನಾದ ಮಹಾನ್ ಶಕ್ತಿಶಾಲಿ ಪುತ್ರ ಜನಿಸುತ್ತಾನೆ’ ಎಂದು ವರ ನೀಡುತ್ತಾರೆ.

ಅದರಂತೆ ನೃತ್ಯಗಾತಿ ವಾನರ ರಾಜ ಕುಂಜರನ ಪುತ್ರಿಯಾಗಿ ಜನಿಸುತ್ತಾಳೆ. ಮುಂದೆ ಕಪಿರಾಜ ಕೇಸರಿಯನ್ನು ವಿವಾಹವಾಗಿ ಇವರಿಬ್ಬರಿಗೆ ಹನುಮಂತ ಜನ್ಮ ತಾಳುತ್ತಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments