Webdunia - Bharat's app for daily news and videos

Install App

ಬಿಲ್ವಪತ್ರೆಯ ಮಹತ್ವ ತಿಳಿದುಕೊಳ್ಳಿ

Webdunia
ಬುಧವಾರ, 8 ಮಾರ್ಚ್ 2017 (12:17 IST)
ಬೆಂಗಳೂರು: ಶಿವ ದೇಗುಲಕ್ಕೆ ಹೋಗುವಾಗಲೆಲ್ಲಾ ಅಂಗಡಿಯಿಂದ ಒಂದು ಕಟ್ಟು ಬಿಲ್ವ ಪತ್ರೆ ತೆಗೆದುಕೊಂಡು ಹೋಗಿ ಪೂಜಾರಿಯ ಬಳಿ ಅರ್ಚಿಸಲು ಕೊಡುತ್ತೇವೆ. ಇದರ ಮಹತ್ವವೇನು ಗೊತ್ತಾ?

 
ಬಿಲ್ವ ಪತ್ರೆ ಶಿವನಿಗೆ ಪ್ರಿಯವಾದ ಪತ್ರೆ. ಸಾಧಾರಣವಾಗಿ ಎಲ್ಲಾ ಶಿವ ಕ್ಷೇತ್ರದಲ್ಲಿ ಬಿಲ್ವ ವೃಕ್ಷವಿರುತ್ತದೆ. ಇದು ಮುಳ್ಳುಗಳಿರುವ ಸುವಾಸಿತ ವೃಕ್ಷ. ಇದರ ಎಲೆ ತ್ರಿದಳಗಳಿಂದ ಕೂಡಿರುತ್ತದೆ. ತ್ರಿದಳವಿರುವ ಬಿಲ್ವಪತ್ರೆಯನ್ನೇ ಅರ್ಚಿಸಬೇಕೆನ್ನುತ್ತಾರೆ.

ಈ ತ್ರಿದಳಗಳು ಶಿವ ದೇವರ ಮೂರು ನೇತ್ರಗಳು ಎನ್ನಲಾಗುತ್ತದೆ.  ಬಿಲ್ವ ವೃಕ್ಷಕ್ಕೆ ಪ್ರದಕ್ಷಿಣೆ ಬರುವುದರಿಂದ, ಬಿಲ್ವ ಪತ್ರೆಯಿಂದ ಶಿವನನ್ನು ಆರಾಧಿಸುವುದರಿಂದ ನಾವು ಮಾಡಿರುವ ಪಾಪ ಕಾರ್ಯಗಳು ನಾಶವಾಗುವುದೆಂಬ ನಂಬಿಕೆಯಿದೆ.

ಬಿಲ್ವ ವೃಕ್ಷದಲ್ಲಿ ಬಿಡುವ ಕಾಯಿಯೂ ತ್ರಿನೇತ್ರಗಳಿಂದ ಕೂಡಿರುವುದು ವಿಶೇಷ. ಈ ಫಲವನ್ನು ಒಡೆಯಬಾರದು ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments