Webdunia - Bharat's app for daily news and videos

Install App

ಮೊಬೈಲ್‌ನಲ್ಲಿ ಭಕ್ತರ ಮೊರೆ ಆಲಿಸುವ ಗಣೇಶ

ಭೀಕಾ ಶರ್ಮಾ
WD
ನೀವು ನಂಬುವಿರಾ… ಭಗವಂತನೂ ಮೊಬೈಲ್ ಬಳಸುತ್ತಾನೆ! ಇದು ಅಚ್ಚರಿಯಲ್ಲವೇ? ನಿಮಗೆ ನಂಬಿಕೆ ಇಲ್ಲವೆಂದಾದಲ್ಲಿ ನಾವು ನಿಮ್ಮನ್ನು 1200 ವರ್ಷಗಳ ಹಳೆಯದಾದ ದೇವಾಲಯವೊಂದಕ್ಕೆ ಕರೆದೊಯ್ಯುತ್ತೇವೆ. ಈ ದೇವಾಲಯದಲ್ಲಿ ಭಗವಾನ್ ಗಣೇಶ ತಮ್ಮ ಭಕ್ತಾದಿಗಳೊಂದಿಗೆ ಮೊಬೈಲ್ ಫೋನ್ ನಲ್ಲಿ ಸಂವಹನ ನಡೆಸುತ್ತಾನೆ.

ಇಂದಿನ ಧಾವಂತದ ಜಮಾನದಲ್ಲಿ ಜನತೆಗೆ ದೇವಾಸ್ಥಾನಕ್ಕೆ ತೆರಳಲು ಸಹ ಸಮಯವಿಲ್ಲದಾಗಿದೆ. ಆದರೂ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇಂದೋರ್‌ನ ಜುನಾ ಚಿಂತಾಮಣ್ ಗಣೇಶ ನಿಮ್ಮ ಪ್ರಾರ್ಥನೆಗಳನ್ನು, ಆಕಾಂಕ್ಷೆಗಳನ್ನು ಮೊಬೈಲ್ ಫೋನಿನಲ್ಲಿಯೇ ಆಲಿಸಿ ನಿಮ್ಮ ಇಷ್ಟಾರ್ಥಗಳನ್ನು ನೇರವೇರಿಸುತ್ತಾನೆ.

WD
ಜುನಾ ಚಿಂತಾಮಣ್ ಗಣೇಶ ದೇವಾಲಯ 1200 ವರ್ಷಗಳಷ್ಟು ಪುರಾತನವಾದುದು. ದೇವಾಲಯದ ಪೂಜಾರಿಯೊಬ್ಬರು ತಿಳಿಸುವಂತೆ ಕಳೆದ 22 ವರ್ಷಗಳಿಂದ ಜನರು ಅಸಂಖ್ಯಾತ ಪತ್ರಗಳನ್ನು ಜುನಾ ಗಣೇಶನಿಗೆ ಕಳುಹಿಸಿಕೊಡುತ್ತಿದ್ದಾರಂತೆ. ದೇವರಿಗೆ ಹರಕೆ ಹೇಳಿಕೊಳ್ಳಲು ಮತ್ತು ತಮ್ಮ ಇಷ್ಟ ದೇವನಿಗೆ ವಂದನೆ ಸಲ್ಲಿಸಲು ಜನ ಪತ್ರ ಬರೆಯುತ್ತಾರೆ. ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್ ಗಳು ವ್ಯಾಪಕವಾಗಿರುವುದರಿಂದ ಭಗವಾನ್ ಗಣೇಶನಿಗೆ ಪತ್ರಗಳ ಜೊತೆಗೆ ಫೋನ್ ಕರೆಗಳು ಸಹ ಬರತೊಡಗಿವೆ. ಭಕ್ತಾದಿಗಳು ಕರೆ ಮಾಡಿದಾಗ ದೇವಾಲಯದ ಪೂಜಾರಿ ಕರೆಯನ್ನು ಸ್ವೀಕರಿಸಿ ದೇವರ ಕಿವಿಯ ಬಳಿ ಹಿಡಿಯುತ್ತಾರೆ. ಭಕ್ತ ನೇರವಾಗಿ ತನ್ನ ಕಷ್ಟ ಕಾರ್ಪಣ್ಯಗಳನ್ನು ದೇವರಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಾನೆ.

ಈ ದೇವಾಸ್ಥಾನಕ್ಕೆ ಖುದ್ದಾಗಿ ಆಗಮಿಸುವ ಭಕ್ತಾದಿಗಳು ಸಹ ಜುನಾ ಚಿಂತಾಮಣ್ ಗಣೇಶ ನಿಜವಾಗಿಯೂ ಮೊಬೈಲ್ ಕರೆಗಳ ಮೂಲಕ ಭಕ್ತಾದಿಗಳ ಮೊರೆಯನ್ನು ಆಲಿಸುತ್ತಾನೆಂದೇ ನಂಬುತ್ತಾರೆ. ಪತ್ರಗಳ ಮೂಲಕ ಅಥನಾ ಫೋನ್ ಮೂಲಕ ತನ್ನನ್ನು ತಲುಪುವ ಕೋರಿಕೆಗಳನ್ನು ಸಹ ಈಡೇರಿಸುತ್ತಾನೆ ಎಂದು ಹೇಳುತ್ತಾರೆ. ಅಂತೆಯೇ ಭಗವಾನ್ ಗಣೇಶನ ಭಕ್ತ ಮನೀಶ್ ಮೋದಿ ಅವರೂ ಈ ಮಾತನ್ನು ಬೆಂಬಲಿಸುತ್ತಾರೆ.

WD
ಜುನಾ ಗಣೇಶನಿಗೆ ಕೇವಲ ಭಾರತಾದ್ಯಂತದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಕರೆಗಳು ಬರುತ್ತವೆ. ಕೋರಿಕೆಯ ಉದ್ದನೆ ಪಟ್ಟಿ ಇರುವ ಭಕ್ತರು ಪತ್ರದ ಮೂಲಕ ಅವುಗಳನ್ನು ದೇವರಿಗೆ ಮುಟ್ಟಿಸುತ್ತಾರೆ. ಈ ಮಾಧ್ಯಮಗಳ ಮೂಲಕ ದೇವರು ತಮ್ಮ ಹರಕೆಯನ್ನು ಆಲಿಸುತ್ತಾನೆ ಮತ್ತು ಅವುಗಳನ್ನು ಈಡೇರಿಸುತ್ತಾನೆ ಎಂಬುದಾಗಿ ಮನೀಶ್ ಹೇಳುತ್ತಾರೆ.

ಗಣೇಶ ದೇವ ನಿಜವಾಗಿಯೂ ಫೋನ್ ಕರೆಗಳು ಮತ್ತು ಪತ್ರಗಳಿಗೆ ಸ್ಪಂದಿಸುತ್ತಾನೆ ಎಂದು ನಿಮಗನಿಸುತ್ತದೆಯೇ ಅಥವಾ ಇದೊಂದು ಮೂಢನಂಬಿಕೆಯೇ? ಈ ಬಗ್ಗೆ ನಿಮಗೇನನಿಸುತ್ತದೆ. ನಾವು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಯ ಬಯಸುತ್ತೇವೆ... ಈ ಕಥನದ ಬಗ್ಗೆ ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳನ್ನು ನೀಡುವಿರಾ.....

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

Show comments