ಜಾತಕದಲ್ಲಿರುವ ಕೇತುವಿನಿಂದ ಯಾವೆಲ್ಲಾ ಸಮಸ್ಯೆ ಬರುತ್ತದೆ?

Krishnaveni K
ಮಂಗಳವಾರ, 16 ಜನವರಿ 2024 (10:58 IST)
ಬೆಂಗಳೂರು: ಯಾರಾದರೂ ಏನಾದರೂ ಕೆಡುಕು ಮಾಡುತ್ತಿದ್ದರೆ ಅವರಿಗೆ ರಾಹು-ಕೇತುಗಳು ಎಂದು ಹಿಡಿಶಾಪ ಹಾಕುತ್ತೇವೆ. ಹಾಗಿದ್ದರೆ ಕೇತು ಗ್ರಹನ ಪರಿಣಾಮ ನಮ್ಮ ಮೇಲೆ ಯಾವ ರೀತಿ ಇರುತ್ತದೆ ನೋಡೋಣ.

ಜಾತಕದಲ್ಲಿ ಕೇತು ಗ್ರಹ ಪ್ರಬಲನಾಗಿದ್ದಾಗ ನಮ್ಮ ಜೀವನದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಅನೇಕ ತೊಂದರೆ, ಕಷ್ಟ-ನಷ್ಟಗಳನ್ನು ಎದುರಿಸಬೇಕಾದೀತು. ಉದ್ಯೋಗದಲ್ಲಿ ತೊಂದರೆ, ಉದ್ಯೋಗ ನಷ್ಟ ಸಾಧ‍್ಯತೆಯಿದೆ. ಅಥವಾ ನಮ್ಮ ವೃತ್ತಿ ಜೀವನದಲ್ಲಿ ನಾವು ಅಂದುಕೊಂಡಂತೇ ಬೆಳವಣಿಗೆ ಸಾಧ್ಯವಾಗದೇ ಹೋಗಬಹುದು. ಕೆಲವೊಂದು ಅಡೆತಡೆಗಳು ಬರುವ ಸಾಧ‍್ಯತೆಯಿದೆ.

ಮಾನಸಿಕವಾಗಿಯೂ ಕೇತು ಗ್ರಹ ನಮಗೆ ಕಷ್ಟಗಳನ್ನು ಕೊಡುತ್ತಾನೆ. ಕೇತುವಿನ ಕಾರಣದಿಂದ ಮನಸ್ಸಿಗೆ ಒಂದು ರೀತಿಯ ಅಶಾಂತಿ, ನೆಮ್ಮದಿಯ ಕೊರತೆ, ಕೌಟುಂಬಿಕ ಸಮಸ್ಯೆಗಳು ಬರಬಹುದು. ಅಥವಾ ಮಾನಸಿಕವಾಗಿ ಕಾಡುವ ಆತಂಕ, ಒತ್ತಡ ಮುಂತಾದ ಮನೋವ್ಯಾದಿಗಳಿಗೂ ಕೇತು ಕಾರಣವಾಗುತ್ತಾನೆ.

ಇಂತಹ ಸಂದರ್ಭದಲ್ಲಿ ನಾವು ಮುಖ್ಯವಾಗಿ ಪೂಜೆ ಮಾಡಬೇಕಾಗಿರುವುದು ವಿಘ‍್ನ ವಿನಾಶಕ ಗಣೇಶನನ್ನು. ಅಲ್ಲದೆ, ಕೇತುವಿನ ಮಂತ್ರ ಅಥವಾ ಕೇತು ಶಾಂತಿ ಮಾಡಿಸಿದರೆ ಪರಿಹಾರ ಕಂಡುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ಹೃದಯ ಸ್ತೋತ್ರ ಇಂದು ತಪ್ಪದೇ ಓದಿ

ಶ್ರೀ ವೆಂಕಟೇಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ದುರ್ಗಾ ಪಂಚರತ್ನ ಸ್ತೋತ್ರ ಇಂದು ತಪ್ಪದೇ ಓದಿ

ಶಿವ ಷಡಕ್ಷರೀ ಸ್ತೋತ್ರಂ ಸೋಮವಾರ ಪಠಿಸಿ

ಶನಿವಾರದಂದು ಶನಿ ದೇವಾಲಯಕ್ಕೆ ಈ ಎರಡು ಸಮಯದಲ್ಲೇ ಭೇಟಿ ನೀಡಬೇಕು

ಮುಂದಿನ ಸುದ್ದಿ
Show comments