Webdunia - Bharat's app for daily news and videos

Install App

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

Webdunia
ಮಂಗಳವಾರ, 29 ಜನವರಿ 2019 (08:55 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಮಾನಸಿಕವಾಗಿ ಸಾಕಷ್ಟು ಕಿರಿ ಕಿರಿ ಅನುಭವಿಸುವಿರಿ. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಬೇಕಾದ ಪರಿಸ್ಥಿತಿ ಬರುತ್ತದೆ. ಸಂಗಾತಿಯೊಂದಿಗೆ ಮನಸ್ತಾಪಗಳು ತಲೆದೋರಿದಾವು. ಹಾಗಿದ್ದರೂ ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ.

ವೃಷಭ: ಆದಾಯದಲ್ಲಿ ನಿರೀಕ್ಷಿತ ಲಾಭ ಕಂಡುಬಂದು ಸ್ಥಿತಿ ಗತಿಗಳು ಸುಧಾರಿಸೀತು. ಹೊಸ ವ್ಯವಹಾರಗಳಿಗೆ ಕೈ ಹಾಕುವಿರಿ. ಸಂಗಾತಿಯೊಂದಿಗೆ ಸರಸ ಕ್ಷಣಗಳಿಗೆ ಭಂಗ ಎದುರಾದೀತು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಿಥುನ: ಸಾಮಾಜಿಕವಾಗಿ ನಿಮ್ಮ ಸ್ಥಾನಮಾನಗಳು ಹೆಚ್ಚಿ ಗೌರವ ಸಂಪಾದಿಸಲಿದ್ದೀರಿ. ಹಾಗಿದ್ದರೂ ನೀವು ಮಾಡುವ ಸಣ್ಣ ತಪ್ಪುಗಳು ಅವಮಾನ ಎದುರಿಸಲು ಕಾರಣವಾಗಬಹುದು. ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾದೀತು.

ಕರ್ಕಟಕ: ಹಲವು ಸಮಸ್ಯೆಗಳು ತೋರಿಬಂದರೂ ಸಂಗಾತಿಯ ಸಲಹೆಯೊಂದಿಗೆ ನಡೆದರೆ ಪರಿಹಾರ ದೊರಕೀತು. ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ. ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೀರಿ. ಹಿಂದೆ ನೀಡಿದ್ದ ಸಾಲಗಳು ಮರುಪಾವತಿಯಾಗುತ್ತವೆ.
ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದೂರ ಸಂಚಾರ ಮಾಡುವಾಗ ಅನಿರೀಕ್ಷಿತವಾಗಿ ಇಷ್ಟವಸ್ತುವೊಂದನ್ನು ಕಳೆದುಕೊಳ್ಳಲಿದ್ದೀರಿ. ದೂರದ ಸಂಬಂಧಿಕರಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ಎಚ್ಚರ ಅಗತ್ಯ.

ಕನ್ಯಾ: ಹಣಕಾಸಿನ ಮುಗ್ಗಟ್ಟು ತಲೆದೋರುತ್ತವೆ. ಸರ್ಕಾರಿ ಅಧಿಕಾರಿಗಳಿಗೆ ಕೆಲವೊಂದು ಅಡೆತಡೆಗಳು ಎದುರಾದೀತು. ಹಿರಿಯರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಹೊಸ ಉದ್ಯೋಗಕ್ಕಾಗಿ ದೂರ ಸಂಚಾರ ಮಾಡಬೇಕಾಗಿ ಬರಬಹುದು.

ತುಲಾ: ಹಣಕಾಸಿನ ಹರಿವಿಗೆ ಏನೂ ಕೊರತೆಯಾಗದು. ಅಷ್ಟೇ ಖರ್ಚುಗಳೂ ತಲೆದೋರುತ್ತದೆ. ಅವಿವಾಹಿತ ಮಕ್ಕಳಿಗೆ ತಕ್ಕ ಸಂಗಾತಿ ಸಿಗದೇ ಚಿಂತೆಗೆ ಕಾರಣವಾಗುತ್ತದೆ. ದಂಪತಿಗಳಿಗೆ ಶುಭ ದಿನ. ಮನೆಯಲ್ಲಿ ಉಲ್ಲಾಸದಾಯಕ ವಾತಾವರಣವಿರುತ್ತದೆ.

ವೃಶ್ಚಿಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ಕೆಲವು ಶತ್ರುಗಳ ಕಾಟದಿಂದ ಮನಸ್ಸಿಗೆ ಬೇಸರ, ಕಾರ್ಯಗಳಿಗೆ ಅಡೆತಡೆಯಾಗುವುದು. ಅನಿರೀಕ್ಷಿತವಾಗಿ ಸಂಕಷ್ಟದ ಘಟನೆಯಲ್ಲಿ ಸಿಲುಕಿಕೊಳ‍್ಳುವಿರಿ. ದಿನದಂತ್ಯಕ್ಕೆ ಶುಭ.

ಧನು: ಕುಲದೇವರ ಪೂಜೆ ಬಾಕಿಯಿದ್ದರೆ ದರ್ಶನ ಪಡೆದು ಆ ಹರಕೆ ತೀರಿಸಿಕೊಳ್ಳಿ. ಸದ್ಯದ ನಿಮ್ಮ ಸಮಸ್ಯೆಗಳಿಗೆ ಅದುವೇ ಪರಿಹಾರ. ಹಾಗಿದ್ದರೂ ಸಂಸಾರಿಕವಾಗಿ ಮಕ್ಕಳೊಂದಿಗೆ ಖುಷಿಯ ಸಮಯ ಕಳೆಯುವಿರಿ.

ಮಕರ: ಯಾವುದೇ ವ್ಯವಹಾರ ಮಾಡುವುದಿದ್ದರೂ ಅಳೆದು ತೂಗಿ ಮಾಡುವುದು ಒಳಿತು. ಆರ್ಥಿಕವಾಗಿ ಮೋಸ, ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಹಾಗಿದ್ದರೂ ಕುಲದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ, ಕೆಲಸಗಳಲ್ಲಿ ಜಯ ಸಿಗುವುದು.

ಕುಂಭ: ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ಕಂಡುಬರುತ್ತದೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಸಿಗುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.

ಮೀನ: ಉದ್ದೇಶಿತ ಕೆಲಸಗಳಿಗೆ ಕೆಲವು ಅಡೆತಡೆಗಳು ತೋರಿಬಂದೀತು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ ಅನುಗ್ರಹ ನಿಮ್ಮ ಮೇಲಿರುವುದು. ಸಂಗಾತಿಯೊಡನೆ ಸರಸಮಯ ಕ್ಷಣ ಕಳೆಯುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments