Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 10 ಜನವರಿ 2020 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಷ್ಟದ ಸಮಯದಲ್ಲಿ ಗೆಳೆಯರಿಂದ ಬರುವ ಸೂಕ್ತ ಸಲಹೆಗಳು ನೆರವಿಗೆ ಬರಲಿವೆ. ಮಾನಸಿಕವಾಗಿ ಶಾಂತಿ ಕಂಡುಕೊಳ್ಳಲು ಯತ್ನಿಸುವಿರಿ. ಆರ್ಥಿಕವಾಗಿ ಧನಾರ್ಜನೆಗೆ ಹೊಸ ಯೋಜನೆಗಳಿಗೆ ಕೈ ಹಾಕುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ವೃಷಭ: ಜೀವನದಲ್ಲಿ ಎದುರಾಗುವ ಏರುಪೇರುಗಳಿಗೆ ಸಿದ್ಧರಾಗಬೇಕಾಗುತ್ತದೆ. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಮುಂದಿನ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟುಗಳು ಎದುರಾಗಲಿವೆ. ಇದಕ್ಕೆ ಇಂದೇ ಸಿದ್ಧರಾಗಿ. ನೂತನ ದಂಪತಿಗಳಿಗೆ ಶುಭ ದಿನ.

ಮಿಥುನ: ಕೃಷಿಕರಿಗೆ ಯಂತ್ರೋಪಕರಣಗಳ ಖರೀದಿಗಾಗಿ ಧನವ್ಯಯ ಮಾಡಬೇಕಾಗುವುದು. ವ್ಯಾಪಾರದಲ್ಲಿ ಕೊಂಚ ಹಿನ್ನಡೆಯಾದರೂ ನಷ್ಟವಾಗದು. ಉಪಯೋಗವಿಲ್ಲವೆಂದು ಬಿಟ್ಟಿದ್ದ ವಸ್ತುವೇ ಇಂದು ನಿಮ್ಮ ನೆರವಿಗೆ ಬರುವುದು. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಕರ್ಕಟಕ:  ಸಾಂಸಾರಿಕವಾಗಿ ಎಲ್ಲರೂ ಇದ್ದರೂ ಏಕಾಂಗಿತನ ಕಾಡಬಹುದು. ಯಾವುದೋ ಮಾನಸಿಕ ಸಮಸ್ಯೆ ನಿಮ್ಮನ್ನು ಕೊರಗುವಂತೆ ಮಾಡಲಿದೆ. ನಿರುದ್ಯೋಗಿಗಳು ಉತ್ತಮ ಅವಕಾಶಗಳನ್ನು ಪಡೆಯುವರು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.

ಸಿಂಹ: ದೈವಾನುಕೂಲದಿಂದ ಇಂದು ನೀವು ಕೈಹಿಡಿವ ಕೆಲಸಗಳು ಯಶಸ್ವಿಯಾಗಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಇದು ಸಕಾಲ. ವೃತ್ತಿ ಸಂಬಂಧವಾಗಿ ಸಂಚಾರ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕಾರ್ಯದೊತ್ತಡವಿರಲಿದೆ.

ಕನ್ಯಾ: ಸಂಸಾರ ಸುಖಕ್ಕೆ ಕೊರತೆಯಿರದು. ದಾಂಪತ್ಯದಲ್ಲಿ ಅನ್ಯೋನ್ಯತೆಯಿರುವುದು. ಮಕ್ಕಳ ದೇಹಾರೋಗ್ಯದ ಬಗ್ಗೆ ಕೊಂಚ ಕಾಳಜಿವಹಿಸುವುದು ಉತ್ತಮ. ಸ್ವ ಉದ್ಯೋಗಿಗಳಿಗೆ ವ್ಯವಹಾರದಲ್ಲಿ ಕೊಂಚ ಹಿನ್ನಡೆಯಾದೀತು. ಆದರೂ ತಾಳ್ಮೆ ಕಳೆದುಕೊಳ್ಳಬೇಡಿ.

ತುಲಾ: ಹೊಸ ಗೆಳೆಯರ ಭೇಟಿಯಾಗುವಿರಿ. ವ್ಯವಹಾರದಲ್ಲಿ ಬರುವ ತೊಂದರೆಗಳ ನಿವಾರಣೆಗೆ ಕ್ರಿಯಾಶೀಲತೆಯಿಂದ ಯೋಚಿಸಬೇಕಾದ ಅಗತ್ಯವಿದೆ. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಯೋಗವಿದೆ. ದಾಯಾದಿ ಕಲಹಗಳು ಅಂತ್ಯವಾಗಲಿದೆ.

ವೃಶ್ಚಿಕ: ವೃತ್ತಿರಂಗದಲ್ಲಿ ಇಷ್ಟು ದಿನ ನಿಮ್ಮ ಬೆನ್ನಹಿಂದೆ ನಡೆಯುತ್ತಿದ್ದ ಮೋಸ, ವಂಚನೆ ಬೆಳಕಿಗೆ ಬರಲಿವೆ. ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರುವುದು. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.

ಧನು: ಗೃಹ ಸಂಬಂಧೀ ಕೆಲಸಗಳಿಗಾಗಿ ಅಧಿಕ ಓಡಾಟ ನಡೆಸಬೇಕಾಗುತ್ತದೆ. ನಿಮ್ಮ ಪ್ರೀತಿಪಾತ್ರ ವಸ್ತುವೊಂದು ಕಳೆದುಕೊಂಡ ದುಃಖ ಅನುಭವಿಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಲಿದೆ.

ಮಕರ: ಅನಗತ್ಯ ಚಿಂತೆಗಳಿಂದ ಉದ್ಯೋಗ, ವ್ಯವಹಾರದಲ್ಲಿ ನಿಷ್ಠುರಕ್ಕೆ ಕಾರಣವಾಗುವಿರಿ. ಆಲಸ್ಯತನ ಬಿಡದಿದ್ದರೆ ಕಾರ್ಯ ನಡೆಯದು. ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಕೋರ್ಟು ಕಚೇರಿ ವ್ಯವಹಾರದಲ್ಲಿ ಹಿನ್ನಡೆಯಾದೀತು. ಹಾಗಿದ್ದರೂ ಕಷ್ಟದ ಸಮಯದಲ್ಲಿ ಮಿತ್ರರ ನೆರವು ಸಿಗಲಿದೆ.

ಕುಂಭ: ಅತಿಯಾದ ಆತ್ಮವಿಶ್ವಾಸ ತೋರಿಸಲು ಹೋದರೆ ಕಾರ್ಯಕ್ಷೇತ್ರದಲ್ಲಿ ತೊಂದರೆ ತಪ್ಪಿದ್ದಲ್ಲ. ವಿಶ್ವಾಸಘಾತುಕರ ಬಗ್ಗೆ ಎಚ್ಚರವಾಗಿರಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು. ದೂರ ಪ್ರಯಾಣದಲ್ಲಿ ಎಚ್ಚರಿಕೆಯಿಂದಿರಿ.

ಮೀನ: ಮಹಿಳೆಯರಿಗೆ ಚಿನ್ನಾಭರಣ ನಷ್ಟವಾಗುವ ಭೀತಿಯಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಾಗಿರಿ. ಹೊಸ ಯೋಜನೆಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಒಳಿತು. ಮಕ್ಕಳಿಂದ ಸಂತಸ ಸಿಗಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕೆಂದರೆ ಬೆಡ್ ರೂಂನಲ್ಲಿ ಈ ಚಿತ್ರ ಹಾಕಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments