Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 30 ಮಾರ್ಚ್ 2019 (08:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಕಾಣುವಿರಿ. ಆದರೆ ಉದ್ಯೋಗ ನಿಮಿತ್ತ ಸಂಚಾರ ಮಾಡುವಾಗ ಏನಾದರೂ ತೊಂದರೆಗಳಾಗುವ ಸಂಭವವಿದೆ. ಸಾಂಸಾರಿಕವಾಗಿ ಹೆಚ್ಚಿನ ನೆಮ್ಮದಿ ಕಾಣುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ: ಅನಿರೀಕ್ಷಿತವಾಗಿ ಕೆಲವು ಘಟನೆಗಳು ನಡೆಯಲಿದ್ದು, ನಿಮ್ಮ ಜೀವನದ ದಿಕ್ಕು ಬದಲಾಯಿಸಲಿದೆ. ಕೋಪದ ಕೈಗೆ ಬುದ್ಧಿ ಕೊಟ್ಟು ಸಂಬಂಧ ಹಾಳು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಜಯ.

ಮಿಥುನ: ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಸ್ಥಾನಪಲ್ಲಟವಾಗಿದೆ. ಮನೆಯಲ್ಲಿ ಆಂತರಿಕ ಕಲಹಗಳು ಮನಸ್ಸಿಗೆ ಬೇಸರವುಂಟುಮಾಡಲಿದೆ. ಆದರೆ ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ವಿದ್ಯಾರ್ಥಿಗಳಿಗೆ ನಿರುತ್ಸಾಹ ತೋರಿಬರಲಿದೆ.

ಕರ್ಕಟಕ: ಉತ್ತಮ ಧನಾಗಮನವಾಗಲಿದ್ದು, ಕಾರ್ಯ ಸಿದ್ಧಿಯಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರವುದು.

ಸಿಂಹ: ಸಂಗಾತಿಗಾಗಿ ಆಭರಣ, ವಸ್ತ್ರ ಖರೀದಿ ಮಾಡಲು ಮುಂದಾಗುವಿರಿ. ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಅಗತ್ಯ. ದೂರ ಸಂಚಾರ ಯೋಗವಿದ್ದು ಪೂರ್ವ ದಿಕ್ಕಿನ ಪ್ರಯಾಣ ನಿಮಗೆ ಶುಭವುಂಟು ಮಾಡಲಿದೆ. ಕಾರ್ಯಸಿದ್ಧಿಗೆ ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಮನೆಯಲ್ಲಿ ಒಂದು ರೀತಿಯ ಕಿರಿ ಕಿರಿ ಉಂಟಾಗುತ್ತದೆ. ಯಾವುದೋ ಹಳೆಯ ಸಮಸ್ಯೆಗಳು ಮತ್ತೆ ಎದುರಾಗುವುದು. ಕಾರ್ಯದೊತ್ತಡದಿಂದ ದೇಹಾಯಾಸವಾಗುವುದು. ಹಳೇ ಬಾಕಿಗಳು ಪಾವತಿಸಬೇಕಿದ್ದರೆ ಇಂದೇ ಮಾಡಿ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಅನವಶ್ಯಕವಾಗಿ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಆರ್ಥಿಕವಾಗಿ ಚೇತರಿಕೆ ಇರುತ್ತದೆ. ಹೊಸ ಆಸ್ತಿ, ಮನೆ ಖರೀದಿಗೆ ಚಿಂತನೆ ಮಾಡುವಿರಿ. ವಿದ್ಯಾರ್ಥಿಗಳು ಪ್ರಯತ್ನ ಬಲ ಮುಂದುವರಿಸಬೇಕು.

ವೃಶ್ಚಿಕ: ಸಂಚಾರದಿಂದ ದೇಹಾಯಾಸವಾಗುವುದು. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚುವುದು. ಕೃಷಿಕರು ಲಾಭ ಪಡೆಯುವರು.

ಧನು: ಮನೆಯಲ್ಲಿ ಶುಭ ಕಾರ್ಯಗಳನ್ನು ನೆರವೇರಿಸಲು ಚಿಂತನೆ ಮಾಡುವಿರಿ. ಶತ್ರು ಭಯ ಇದ್ದೇ ಇರುತ್ತದೆ. ಆದರೆ ಬೇಡದ ಆಲೋಚನೆಗಳಿಂದ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಉದ್ಯೋಗಿಗಳು ಮುನ್ನಡೆ ಕಾಣುವರು.

ಮಕರ: ಅನಿರೀಕ್ಷಿತವಾಗಿ ಬರುವ ಬಂಧುಮಿತ್ರರಿಂದ ಶುಭ ವಾರ್ತೆ ನಿರೀಕ್ಷಿಸಬಹುದು. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುವಿರಿ. ವಿದ್ಯಾರ್ಥಿಗಳು ಪೋಷಕರ ಮೆಚ್ಚುಗೆ ಪಡೆಯುವ ಕೆಲಸ ಮಾಡುವರು.

ಕುಂಭ: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ದಾಯಾದಿಗಳಿಂದ ಆಸ್ತಿ ಸಂಬಂಧಿತ ವಿವಾದ, ಕಿರಿ ಕಿರಿ ಉಂಟಾಗಲಿದೆ. ದೇವತಾ ಪ್ರಾರ್ಥನೆ ಮಾಡಿದರೆ ನೆಮ್ಮದಿ.

ಮೀನ: ದೇವತಾನುಗ್ರಹ ನಿಮ್ಮ ಮೇಲಿದ್ದು, ಕೈಗೊಂಡ ಕಾರ್ಯಗಳು ನೆರವೇರುವುದು. ಮನೆಯಲ್ಲಿ ಮದುವೆ ಮಾತುಕತೆಗಳು ನಡೆಯಲಿದ್ದು, ಹೆಚ್ಚಿನ ಓಡಾಟ ನಡೆಸಲಿದ್ದೀರಿ. ವೃತ್ತಿರಂಗದಲ್ಲಿ ಮೇಲ್ಮಟ್ಟಕ್ಕೆ ಏರುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಲಕ್ಷ್ಮೀ ದೇವಿಯ ಕೃಪೆಗಾಗಿ ಇಂದು ಈ ಸ್ತೋತ್ರವನ್ನು ಓದಿ

ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments