Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 4 ಫೆಬ್ರವರಿ 2019 (08:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮಾನಸಿಕವಾಗಿ ಕಾಡುತ್ತಿರುವ ಯಾವುದೋ ಚಿಂತೆಗೆ ನೀವೇ ಸಾಂತ್ವನ ಹೇಳಿಕೊಳ್ಳಬೇಕು. ಆರೋಗ್ಯದಲ್ಲಿ ಕೊಂಚ ಏರುಪೇರಾದೀತು. ಕಾರ್ಯಕ್ಷೇತ್ರದಲ್ಲಿ ಒತ್ತಡವಿರುತ್ತದೆ. ಮನೆಗೆ ಹೊಸ ವಸ್ತುಗಳ ಖರೀದಿ ಮಾಡುವಿರಿ.

ವೃಷಭ: ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗುವ ಪ್ರಸಂಗ ಎದುರಾಗಬಹುದು. ಪ್ರವಾಸ ಕೈಗೊಳ್ಳುವಿರಿ. ಧನಾಗಮನವಾಗಿ ಆರ್ಥಕ ಮುಗ್ಗಟ್ಟುಗಳು ದೂರವಾಗುವುದು.

ಮಿಥುನ: ಹಿರಿಯರ ತೀರ್ಥ ಯಾತ್ರೆಗೆ ಬೇಕಾದ ವ್ಯವಸ್ಥೆ ಮಾಡುವಿರಿ. ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ. ಅವಿವಾಹಿತರಿಗೆ ಕಂಕಣ ಬಲ ಒದಗಿಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು. ಹೆಚ್ಚಿನ ಶುಭಫಲಗಳಿಗೆ ಕುಲದೇವರ ಆರಾಧನೆ ಮಾಡಿ.

ಕರ್ಕಟಕ: ಮನೆಯಲ್ಲಿ ಅವಿವಾಹಿತ ಮಕ್ಕಳಿದ್ದರೆ ಅವರ ವಿವಾಹ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಆಸ್ತಿ ವಿವಾದಗಳು ನಿಮಗೆ ಅನುಕೂಲಕರವಾದ ರೀತಿಯಲ್ಲಿ ಬಗೆಹರಿಯಲಿದೆ.

ಸಿಂಹ: ಅಗತ್ಯದ ಸಂದರ್ಭದಲ್ಲಿ ಹಣಕಾಸು ಸಿಗದೇ ಕಾರ್ಯಸಾಧನೆಗೆ ಒದ್ದಾಡಬೇಕಾದೀತು. ಆದರೆ ಮಿತ್ರರ ನೆರವು ದೊರಕಲಿದೆ. ವೃತ್ತಿಯಲ್ಲಿ ವರ್ಗಾವಣೆ, ಕಾರ್ಯದೊತ್ತಡವಾಗಲಿದೆ. ಆರೋಗ್ಯ ಸಮಸ್ಯೆಯೂ ಕಂಡುಬಂದೀತು.

ಕನ್ಯಾ: ಕುಟುಂಬದಲ್ಲಿ ಶುಭ ಕಾರ್ಯ ನೆರವೇರಿಸುವಿರಿ. ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ವ್ಯವಹಾರದಲ್ಲಿ ಚೇತರಿಕೆ ಕಂಡುಬಂದು ನೆಮ್ಮದಿ ಮೂಡುವುದು.

ತುಲಾ: ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು. ಹಿರಿಯರ ಆಶೀರ್ವಾದದಿಂದ ಎಂತಹದ್ದೇ ಕಷ್ಟವಾದರೂ ನಿಭಾಯಿಸುವಿರಿ.

ವೃಶ್ಚಿಕ: ವೃತ್ತಿಯಲ್ಲಿ ವರ್ಗಾವಣೆಯಾಗಲಿದೆ. ಕುಟುಂಬದಲ್ಲಿ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳಿದ್ದರೂ ಹೊಂದಾಣಿಕೆಯಿಂದ ನಡೆಯಿರಿ. ಮನೆಯಲ್ಲಿ ಶುಭ ಕಾರ್ಯ ನಡೆಸಲು ಓಡಾಟ ನಡೆಸುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಧನು: ಕುಲದೇವರಿಗೆ ಸಂಬಂಧಿಸಿದ ದೈವ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಸಮಾಧಾನಕರ ದಿನ. ತಾಳ್ಮೆಯಿಂದ ವ್ಯವಹರಿಸಬೇಕು. ಆರ್ಥಿಕವಾಗಿ ಆದಾಯವಿದ್ದಷ್ಟೂ ಖರ್ಚೂ ಅಧಿಕವಾಗಲಿದೆ.

ಮಕರ: ಉದ್ಯೋಗದಲ್ಲಿ ವೇತನ ಹೆಚ್ಚಳ, ಬಡ್ತಿ ಯೋಗವಿದೆ. ದಂಪತಿಗಳ ನಡುವೆ ವಿರಸ ಮೂಡಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಅವಿವಾಹಿತರು ಕೆಲವು ದಿನ ಕಾಯಬೇಕಾದೀತು. ದೂರ ಸಂಚಾರ ಮಾಡುವಿರಿ.

ಕುಂಭ: ಕುಟುಂಬದಲ್ಲಿ ಇದುವರೆಗೆ ಇದ್ದ ಭಿನ್ನಾಭಿಪ್ರಾಯವು ದೂರವಾಗಿ ನೆಮ್ಮದಿ ನೆಲೆಸುವುದು. ನೂತನ ದಂಪತಿಗಳು ಮಧುಚಂದ್ರ ಭಾಗ್ಯ ಅನುಭವಿಸುವರು. ಉದ್ಯೋಗದಲ್ಲಿ ಅಡೆತಡೆಗಳಿದ್ದರೂ ನಿಮ್ಮ ಮುನ್ನಡೆಗೆ ತೊಂದರೆಯಾಗದು.

ಮೀನ: ವಿದೇಶ ಪ್ರಯಾಣ ಮುಂದೂಡುವುದು ಒಳ್ಳೆಯದು. ಆರ್ಥಿಕವಾಗಿ ಸಾಕಷ್ಟು ಧನಾಗಮನವಾಗಲಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಮಕ್ಕಳ ವಿಚಾರದಲ್ಲಿ ಚಿಂತೆ ಮಾಡುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕುಜ ದೋಷವಿದ್ದವರು ಇಂದು ಈ ಅಷ್ಟೋತ್ತರ ಪಠಿಸಿ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments