Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 19 ಡಿಸೆಂಬರ್ 2018 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯದ ನಿಮಿತ್ತ ವಿಪರೀತ ಓಡಾಟ ಮಾಡಿ ಆಯಾಸಗೊಳ್ಳುತ್ತೀರಿ. ಹಾಗಿದ್ದರೂ ಕಾರ್ಯಸಾಧನೆಗೆ ಅನುಕೂಲವಾದ ವಾತಾವರಣವಿರಲಿದೆ. ಮಕ್ಕಳ ವಿಚಾರದಲ್ಲಿ ಆಸಕ್ತಿ ತೋರಬೇಕಾಗುತ್ತದೆ.

ವೃಷಭ: ಹೊಸ ಕೆಲಸಗಳಿಗೆ ಹೂಡಿಕೆ ಮಾಡಿ ಲಾಭ ಗಳಿಸುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಮಿಥುನ: ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಸಾರ್ವಜನಿಕವಾಗಿ ಗೌರವ, ಸ್ಥಾನ ಮಾನಗಳು ದೊರಕುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು.

ಕರ್ಕಟಕ: ಸಂಗಾತಿ ಜತೆ ರಸಮಯ ಕ್ಷಣ ಕಳೆಯುವಿರಿ. ವ್ಯವಹಾರ ಮಾಡುವಾಗ ಮೋಸ ವಂಚನೆಗೊಳಗಾಗುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು.

ಸಿಂಹ: ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಧನ ವಿನಿಯೋಗ ಮಾಡಬೇಕಾದೀತು. ವಂಚಕರ ಬಗ್ಗೆ ಎಚ್ಚರವಾಗಿರಿ. ಪ್ರಯತ್ನ ಬಲವಿದ್ದಲ್ಲಿ ಕಾರ್ಯ ಸಾಧನೆಯಾಗಲಿದೆ.

ಕನ್ಯಾ: ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿಭಾಯಿಸಿ. ತಾಳ್ಮೆಯೇ ನಿಮ್ಮ ಇಂದಿನ ಯಶಸ್ಸಿಗೆ ಮೂಲ ಕಾರಣವಾಗಲಿದೆ. ಉದ್ಯೋಗ ಲಾಭವೂ ಆಗಲಿದೆ.

ತುಲಾ: ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ಸಂಸಾರದಲ್ಲಿ ಹೊಂದಾಣಿಕೆ ಅಗತ್ಯ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ವೃಶ್ಚಿಕ: ನಿರೀಕ್ಷಿಸದೇ ಇದ್ದ ಅಚ್ಚರಿಯ ವಾರ್ತೆಯೊಂದನ್ನು ಕೇಳುವಿರಿ. ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುವಿರಿ. ಕುಟುಂಬದ ಸದಸ್ಯರೊಂದಿಗೆ ಸಹನೆಯಿಂದ ವರ್ತಿಸಿ.

ಧನು: ಕಾರ್ಯ ಸಾಧನೆಗಾಗಿ ದೂರ ಸಂಚಾರ ಕೈಗೊಳ್ಳುವಿರಿ. ಧನ ವ್ಯಯ ಮಾಡಬೇಕಾದೀತು. ದೇವತಾ ದರ್ಶನದಿಂದ ನೆಮ್ಮದಿ ಕಾಣುವಿರಿ.

ಮಕರ: ಸಂಗಾತಿ ಜತೆಗೆ ಹೊಂದಾಣಿಕೆ ಅಗತ್ಯ. ವೃತ್ತಿಯಲ್ಲಿ ವಂಚನೆಗೊಳಗಾಗುವ ಸಂಭವವಿದೆ. ಎಚ್ಚರದಿಂದ ವರ್ತಿಸಿ. ದಿನದಂತ್ಯಕ್ಕೆ ಶುಭ ಸುದ್ದಿ.

ಕುಂಭ: ಮಂಗಲ ಕಾರ್ಯ ಕೈಗೊಳ್ಳಲು ಮುಂದಾಗುವಿರಿ. ದೇವರ ದರ್ಶನ ಪಡೆಯುವಿರಿ. ಕುಟುಂಬದ ಯಾರಾದರೂ ಒಬ್ಬರಿಂದ ದುಃಖದ ವಾರ್ತೆ ಕೇಳಬೇಕಾದೀತು.

ಮೀನ: ದೇವರ ಕಾರ್ಯಗಳಿಗಾಗಿ ದೂರ ಸಂಚಾರ ಮಾಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಸಿಗಲಿದೆ. ಬೇಡದ ಆಲೋಚನೆಗಳನ್ನು ಮನಸ್ಸಲ್ಲಿ ತುಂಬಿಕೊಂಡು ನೆಮ್ಮದಿ ಹಾಳುಮಾಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments