Webdunia - Bharat's app for daily news and videos

Install App

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರ ಉಪಯೋಗವೇನು ಗೊತ್ತಾ?

Webdunia
ಬುಧವಾರ, 6 ಮೇ 2020 (08:43 IST)
ಬೆಂಗಳೂರು: ಆಯುರ್ವೇದದ ಪ್ರಕಾರ ಬೆಳಿಗ್ಗಿನ ಜಾವ 3.00 ರಿಂದ 6.00 ರವರೆಗಿನ ಮುಹೂರ್ತವನ್ನು ಬ್ರಾಹ್ಮಿ ಮುಹೂರ್ತ ಎನ್ನಲಾಗುತ್ತದೆ. ಈ ಸಮಯದಲ್ಲಿ ಎದ್ದೇಳುವುದರಿಂದ ಆಗುವ ಉಪಯೋಗಗಳೇನು ಗೊತ್ತಾ?


ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರಬದ್ಧವಾಗಿ ನಿಷಿದ್ಧ.

ವೈಜ್ಞಾನಿಕವಾಗಿಯೂ ಈ ಸಮಯದಲ್ಲಿ ವಾಯುಮಂಡಲ ವಿಷ ಮುಕ್ತವಾಗಿರುವುದರಿಂದ ಈ ಸಮಯದಲ್ಲಿ ಗಾಳಿ ಸೇವನೆ ಮಾಡುವುದು ಶ್ವಾಸಕೋಶಕ್ಕೆ ಉತ್ತಮ. ಈ ಮುಹೂರ್ತದಲ್ಲಿ ಎದ್ದೇಳುವವರ ಶರೀರದಲ್ಲಿ ಸಂಜೀವಿನಿ ಸಂಚಾರ ಮಾಡುತ್ತದೆ. ಈ ಸಮಯದಲ್ಲಿ ಅಧ್ಯಯನ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ರಾಮಾಯಣದಲ್ಲಿ ಸೀತೆಯನ್ನು ಹುಡುಕುತ್ತಾ ಆಂಜನೇಯ ಬ್ರಾಹ್ಮಿ ಮುಹೂರ್ತಕ್ಕೇ ಲಂಕೆ ತಲುಪಿದ ಎನ್ನಲಾಗುತ್ತದೆ. ಈ ಸಮಯದಲ್ಲಿ ಆಲಸ್ಯ ಬಿಟ್ಟು ಎದ್ದು ಕೆಲಸ ಮಾಡುವುದರಿಂದ ಶ್ರೇಯಸ್ಸು ಸಿಗುವುದು ಎಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಶಿವ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ ತಪ್ಪದೇ ಓದಿ

ಮಾನಸಿಕ ನೆಮ್ಮದಿಗಾಗಿ ಈ ಕಿರು ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿ

ಶುಕ್ರವಾರ ಈ ಲಕ್ಷ್ಮೀ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments