ರಾಹುದೆಶೆ ಮತ್ತು ರಾಹು ದೋಷ ಬಗ್ಗೆ ತಿಳಿದಿರಲಿ

Webdunia
ಮಂಗಳವಾರ, 6 ಸೆಪ್ಟಂಬರ್ 2016 (10:28 IST)
ಕಂಟಕಶನಿ, ಸಾಡೆ ಸಾಥ್ ,ದಶಾಸಂಧಿ, ರಾಹು ಕೇತು ಇವೇ ಮೊದಲಾದುವುಗಳು ಗ್ರಹ ದೋಷಗಳಲ್ಲಿ ಪ್ರಧಾನವಾಗಿರುವವುಗಳು.ಜಾತಕ ಪ್ರಕಾರ ರಾಹು ದೆಶೆ ಅನುಭವಿಸುವವರು ಮತ್ತು ರಾಹು ಅನಿಷ್ಟ ಸ್ಥಾನದಲ್ಲಿರುವವರಿಗೆ ಕೆಲವು ಅಡಚಣೆಗಳು, ಮನೋವೇದನೆಗಳು ಅನುಭವಕ್ಕೆ ಬರುವುದು. ನವಗ್ರಹಗಳಲ್ಲಿ ರಾಹುವಿಗೆ ಸರ್ಪದ ರೂಪವಿದೆ ಎಂದು ನಂಬಿಕೆ.

 
ಆದುದರಿಂದಲೇ ಗ್ರಹ ಸ್ಥಾನದಲ್ಲಿ 'ಸ' ಎಂಬ ಅಕ್ಷರವನ್ನು ರಾಹುವಿನ ಸ್ಥಾನವನ್ನು ತೋರಿಸಲು ಬಳಸಲಾಗುತ್ತದೆ. ರಾಹು ಯಾವಾಗಲೂ ಒಂದೂವರೆ ಗಂಟೆಗಳಷ್ಟು ಕಾಲ ವಿಷವನ್ನು ಪಸರಿಸುತ್ತಾನೆ ಎಂಬ ಸಂಕಲ್ಪದಿಂದಾಗಿ ಈ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ.ಆದುದರಿಂದಲೇ ಶುಭ ಕಾರ್ಯನಿಮಿತ್ತ ಮನೆಯಿಂದ ಹೊರಡುವುದಾದರೆ ಈ ಘಳಿಗೆಯ ಮೊದಲು ಅಥವಾ ನಂತರ ಹೊರಡುವುದು ಸೂಕ್ತ.
 
ರಾಹುಕಾಲದಲ್ಲಿ ಪ್ರತಿದಿನವೂ ಪ್ರಾರ್ಥನೆ, ಬಲಿವಾಡು ಮೊದಲಾದವುಗಳನ್ನು ಕೈಗೊಂಡಲ್ಲಿ ದೋಷ ಪರಿಹಾರವಾಗುವುದು. ಭಾನುವಾರ ಸಂಜೆ 4.30 ರಿಂದ 6 ಗಂಟೆಯ ವರೆಗೆ ರಾಹುವಿಗೆ ಬಲಿವಾಡು ಅರ್ಪಿಸಲು ತಕ್ಕುದಾದ ಸಮಯವಾಗಿದೆ.
 
ಶಿವನ ಅವತಾರವಾದ ಶರಭೇಶ್ವರನನ್ನು ಪ್ರಾರ್ಥಿಸುವುದರಿಂದ ರಾಹುದೋಷ ಪರಿಹಾರವಾಗುವುದು. ರಾಶಿ ಚಕ್ರದಲ್ಲಿ ರಾಹುವಿನ ಇಷ್ಟ ಸ್ಥಾನವು 3,6,11 ಆಗಿದ್ದು ಮಿಥುನ ರಾಶಿ ಉಚ್ಛವೂ ಧನುರಾಶಿ ನೀಚವೂ ಆಗಿರುವುದು.
 
ಶನಿಮಂಡಲ ಮತ್ತು ಗುರುಮಂಡಲದ ನಡುವೆ ರಾಹು ಕೇತುಗಳ ಸ್ಥಾನವಿರುವುದು. 18 ವರುಷಗಳನ್ನು ಬಳಸಿ ಅವುಗಳು ಸೂರ್ಯನ ಸುತ್ತ ಒಮ್ಮೆ ಭ್ರಮಣ ನಡೆಸುತ್ತವೆ. ಒಂದೂವರೆ ವರ್ಷಗಳಷ್ಟು ಕಾಲ ರಾಹು ಒಂದು ರಾಶಿಯಲ್ಲಿ ತಂಗುತ್ತದೆ.ಆ ರಾಶಿಯ ಏಳನೇ ರಾಶಿಯಲ್ಲಿ ಅಷ್ಟೇ ಸಮಯದ ವರೆಗೆ ಕೇತುವೂ ಇರುತ್ತದೆ. ಆದರೆ ಕೌತುಕದ ವಿಷಯವೇನೆಂದೆರ ರಾಹು ಕೇತುಗಳು ಹಿಂದಕ್ಕೆ ಚಲಿಸುವವುಗಳಾಗಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜ್ಯೋತಿಷ್ಯ ಪ್ರಕಾರ ವೃಶ್ಚಿಕ ರಾಶಿಯವರ ಆಹಾರ ಕ್ರಮ ಹೇಗಿರಬೇಕು

ದಾರಿದ್ರ್ಯ ನಾಶಕ್ಕಾಗಿ ಗಣಪತಿಯ ಈ ಸ್ತೋತ್ರ ಓದಿ

ಜ್ಯೋತಿಷ್ಯ ಪ್ರಕಾರ ತುಲಾ ರಾಶಿಯವರ ಆಹಾರ ಹೇಗಿರಬೇಕು

ದುರ್ಗಾ ಕವಚ ಸ್ತೋತ್ರ ಇಂದು ತಪ್ಪದೇ ಓದಿ

ಜ್ಯೋತಿಷ್ಯ ಪ್ರಕಾರ ಕನ್ಯಾ ರಾಶಿಯವರ ಆಹಾರ ಕ್ರಮ ಹೇಗಿರಬೇಕು

ಮುಂದಿನ ಸುದ್ದಿ
Show comments