Webdunia - Bharat's app for daily news and videos

Install App

ವಿವಾಹ ನೆರವೇರಿಸಲು ಮುಹೂರ್ತಗಳಿಲ್ಲ ಎನ್ನುವುದು ಕೇವಲ ವದಂತಿ

Webdunia
PR
ಸುಮಾರು 2 ತಿಂಗಳು ಶುಭಕಾರ್ಯಗಳನ್ನು ಮಾಡಲು ಮುಹೂರ್ತಗಳಿಲ್ಲವೆಂದು ಕೆಲವು ಪುರೋಹಿತರು ಹಾಗೂ ಜ್ಯೋತಿಷ್ಯರು ಪ್ರಚಾರಪಡಿಸುತ್ತಿದ್ದಾರೆ. ಇದು ತಪ್ಪು ಎನಿಸುತ್ತದೆ. ಮುಹೂರ್ತ ಗ್ರಂಥಗಳ ಪೂರ್ಣ ಅಧ್ಯಯನ ಮಾಡಿರುವುದಿಲ್ಲ ಎನಿಸುತ್ತದೆ.

ಯಾವುದೇ ಶಾಸ್ತ್ತ್ರಗಳು ಮನುಷ್ಯನ ಪ್ರಗತಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು ಪ್ರತಿಯೊಂದಕ್ಕೂ ಜ್ಯೋತಿಷ್ಯ ಗ್ರಂಥಗಳಲ್ಲಿ ಪರ್ಯಾಯ ವ್ಯವಸ್ಥೆ ಇದ್ದೇ ಇರುತ್ತದೆ ಅದನ್ನು ನಾವು ಗಮನಿಸಿ ಸೂಕ್ತ ಸಮಯಗಳಲ್ಲಿ ಬಳಸಿಕೊಳ್ಳಬೇಕು.

ಈಗ ಶುಭಕಾರ್ಯಗಳಿಗೆ ಮುಹೂರ್ತಗಳಿಲ್ಲವೆನ್ನುವುದಕ್ಕೆ ಶುಕ್ರ ಕಾರಣ. ಈ ಶುಕ್ರನು ಫೆಬ್ರವರಿ 19 ರಿಂದ ಏಪ್ರಿಲ್ 21ನೇ ತಾರೀಖಿವರೆಗೆ ಅಸ್ತವಾಗಿರುತ್ತದೆ. ಶುಭಕಾರ್ಯಗಳನ್ನು ಜರುಗಿಸಲು ಶುಭಗ್ರಹಗಳಾದ ಗುರು ಮತ್ತು ಶುಕ್ರರು ಒಳ್ಳೆಯ ಸ್ಥಾನಗಳಲ್ಲಿರಬೇಕು ಎಂಬುದು ವಿಧಿತವಾಗಿದೆ.

ಶುಕ್ರನು ಫೆಬ್ರವರಿ 19 ರಿಂದ ಏಪ್ರಿಲ್ 21ರವರೆಗೆ ಒಟ್ಟು 61 ದಿವಸಗಳ ಕಾಲ ಅಸ್ತವಾಗಿರುತ್ತಾನೆ. ಅಂದರೆ ಸೂರ್ಯನೊಂದಿಗೆ ಇರುತ್ತದೆ. ಇದೇ ರೀತಿ ಗುರುವು ಜೂನ್ 6 ರಿಂದ ಜುಲೈ 2ರವರೆಗೆ ಒಟ್ಟು 26 ದಿವಸ ಅಸ್ತನಾಗುತ್ತಾನೆ. ಶುಕ್ರನು ಸೂರ್ಯನ ಪರಿಧಿ 10 ಡಿಗ್ರಿಯೊಳಗೆ ಸಂಚರಿಸುವಾಗ ಅಸ್ತನಾಗುತ್ತಾನೆ. ಪರಿಧಿಯ 10 ಡಿಗ್ರಿ ದಾಟಿದಾಗ ಶುಕ್ರ ಉದಯವಾಗುತ್ತಾನೆ. ಇದೇ ರೀತಿ ಗುರು ಸೂರ್ಯನ ಪರಿಧಿ 11 ಡಿಗ್ರಿಯೊಳಗೆ ಸಂಚರಿಸುವಾಗ ಅಸ್ತವಾಗಿ ಪರಿಧಿಯ 11 ಡಿಗ್ರಿ ದಾಟಿದಾಗ ಗುರು ಉದಯವಾಗುತ್ತದೆ.

ವಿವಾಹದ ಹೊಸ್ತಿಲಲ್ಲಿ ನಿಂತಿರುವ ನವ ಯುವಕ-ಯುವತಿಯರು ಈ ವದಂತಿಯಿಂದ ವಂಚಿತರಾಗಲಿದ್ದಾರೆ. ಇದು ಆತಂಕಕ್ಕೆ ಈಡುಮಾಡಿದೆ. ಮುಹೂರ್ತ ಗ್ರಂಥಗಳನ್ನು ಸರಿಯಾಗಿ ಅಧ್ಯಯನ ಮಾಡದಿರುವುದೇ ಕಾರಣವಾಗಿದೆ.

ಶುಕ್ರ ಮತ್ತು ಗುರು ಅಸ್ತವಾದಾಗ ಪರ್ಯಾಯವಾಗಿ ಮುಹೂರ್ತ ಗ್ರಂಥ ಕಾಲಪ್ರಕಾರದಲ್ಲಿ 34ನೇ ಅಧ್ಯಾಯದಲ್ಲಿ ಅಸ್ತಂಗತ ಕಾಲಂನಲ್ಲಿ ಶುಕ್ರ ಅಸ್ತವಾದ ಅವಧಿಯಲ್ಲಿ ಎಲ್ಲಾ ಶುಭಕಾರ್ಯಗಳನ್ನು (ವಿವಾಹ, ಗೃಹಪ್ರವೇಶ, ಉಪನಯನ ಇತ್ಯಾದಿ) ಮುಹೂರ್ತ ಲಗ್ನದಲ್ಲಿ ಅಥವಾ ಕೇಂದ್ರ ಸ್ಥಾನದಲ್ಲಿ ಗುರು ಇರುವಂತೆ ಮುಹೂರ್ತ ಲಗ್ನವನ್ನು ನಿಗದಿಪಡಿಸಿ ಮಾಡಬಹುದು. ಯಾವುದೇ ದೋಷಬರುವುದಿಲ್ಲ ಹಾಗೆಯೇ ಗುರು ಅಸ್ತವಾದಾಗ ಶುಕ್ರನನ್ನು ಮುಹೂರ್ತ ಲಗ್ನ ಅಥವಾ ಕೇಂದ್ರದಲ್ಲಿ ಬರುವಂತೆ ಮುಹೂರ್ತ ಲಗ್ನವನ್ನು ಇಟ್ಟು ಎಲ್ಲಾ ರೀತಿಯ ಶುಭಕಾರ್ಯಗಳನ್ನು ಮಾಡಬಹುದು ಎಂದು ಸ್ಪಷ್ಟವಾಗಿ ದೃಡಪಡಿಸಿದೆ.

ಆದ್ದರಿಂದ ಶುಕ್ರ ಅಸ್ತವಾಗಿರುವಾಗ ಮುಹೂರ್ತಗಳಿಲ್ಲವೆಂದು ತಿಳಿಸುವುದು ಸಮಂಜಸವಲ್ಲ. ಸೂರ್ಯ-ಚಂದ್ರರ ಚಲನೆಯಿಂದ ಹೇಗೆ ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳು ಉಂಟಾಗುತ್ತದೆಯೋ ಹಾಗೆಯೇ ಮುಹೂರ್ತಗಳು ಪ್ರತೀದಿವಸವು ಇದ್ದೇ ಇರುತ್ತದೆ. ಹಗಲು 15 ಮುಹೂರ್ತ ರಾತ್ರಿ 15 ಮುಹೂರ್ತ ಒಟ್ಟು ಒಂದು ದಿವಸಕ್ಕೆ 30 ಮುಹೂರ್ತಗಳಿರುತ್ತದೆ.

ಈ ಮುಹೂರ್ತಗಳನ್ನು ವಧೂ-ವರರ ತಾರಾಬಲ-ಚಂದ್ರಬಲಕ್ಕನುಗುಣವಾಗಿ ಶುಭ ನಕ್ಷತ್ರ, ತಿಥಿ, ಯೋಗಗಳನ್ನು ಆಯ್ಕೆ ಮಾಡಿ ವಿವಾಹ ಹಾಗೂ ಇತರೆ ಶುಭಕಾರ್ಯಗಳನ್ನು ಮಾಡಬಹುದಾಗಿದೆ ಯಾರೂ ಆತಂಕಗೊಳ್ಳುವ ಅವಶ್ಯಕತೆಯಿಲ್ಲ.

ಆರ್. ಸೀತಾರಾಮಯ್ಯ,
ಜೋತೀಷ್ಯರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೋ: 94490 48340
ಪೋನ್: 08182-227344

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments