ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು.
1. ಪತಿ-ಪತ್ನಿಯ ನಡುವೆ ಕ್ಲೇಷವಿದ್ದರೆ, ನೆಮ್ಮದಿಯೇ ಇರದಿದ್ದರೆ, ದಿನವೂ ಜಗಳಗಳಾಗುತ್ತಿದ್ದರೆ ತಲೆಯಲ್ಲಿ ನವಿಲುಗರಿ ಧರಿಸಿದ ಶ್ರೀಕೃಷ್ಣನ ಅಥವಾ ಬಾಲಕೃಷ್ಣನ ಮೂರ್ತಿಯನ್ನು ಮನೆಯಲ್ಲಿ ಸ್ಥಾಪನೆ ಮಾಡಿ. ಅಥವಾ ಪ್ರತಿದಿನವೂ ಓಂ ನವೋ ಭಗವತೇ ವಾಸುದೇವಾಯ ಅಥವಾ ಓಂ ನಮೋ ವಾಸುದೇವಾಯ ಕೃಷ್ಣಾಯ ನಮಃ ಶಿವಾಯ ಎಂದು ಜಪ ಮಾಡುತ್ತಿರಿ. ಈ ಮೂಲಕ ಕಾಳಸರ್ಪ ಯೋಗದ ಶಾಂತಿಯಾಗುತ್ತದೆ.
2. ಬ್ಯುಸಿನೆಸ್ನಲ್ಲಿ ಯಾವಾಗಲೂ ತೊಂದರೆಯಿದ್ದರೆ ಅಥವಾ ಬ್ಯುಸಿನೆಸ್ ಸರಿಯಾಗಿ ನಡೆಯುತ್ತಿಲ್ಲವೆಂದಾದರೆ ಪಾಲಾಶದ ಹೂವನ್ನು ಗೋಮೂತ್ರದಲ್ಲಿ ಮುಳುಗಿಸಿ ಸಂಸ್ಕರಿಸಿ ನೆರಳಿನಲ್ಲಿ ಹಾಗೇ ಇಡಿ. ನಂತರ ಅದರ ಚೂರ್ಣ ಮಾಡಿ ಚಂದನದ ಪುಡಿಯ ಜೊತೆಗೆ ಕಲಸಿ ಶಿವಲಿಂಗಕ್ಕೆ ಮೂರು ನಾಮ ಬಳಿಯಿರಿ. ಹೀಗೆ ಮಾಡಿದ 25 ದಿನಗಳಲ್ಲಿ ಬ್ಯುಸಿನೆಸ್ ಸುಧಾರಿಸುತ್ತದೆ.
3. ನಿಮ್ಮ ಕುಂಡಲಿಯಲ್ಲಿ ಕಾಳಸರ್ಪ ಯೋಗವಿದ್ದರೆ ಪ್ರತಿದಿನವೂ ಶಿವ ದೇವರ ಕುಟುಂಬವನ್ನೇ ಭಕ್ತಿಯಿಂದ ಪೂಜಿಸಿ. ಆಗ ಕಾಳ ಸರ್ಪಯೋಗದ ಕೆಟ್ಟ ಯೋಗ ನಿಮಗೆ ತಾಗುವುದಿಲ್ಲ.
4. ನಿಮಗೆ ಕಾಳ ಸರ್ಪಯೋಗದಲ್ಲಿ ಶತ್ರುಭಯವಿದ್ದರೆ ಬೆಳ್ಳಿ ಅಥವಾ ತಾಮ್ರದ ಸರ್ಪ ಮಾಡಿ ಅದರ ಕಣ್ಣಿಗೆ ಕಾಡಿಗೆ ಹಚ್ಚಿ. ನಂತರ ಆ ಸರ್ಪವನ್ನು ಶಿವಲಿಂಗದ ತಲೆಯ ಮೇಲೆ ಇಡಿ. ನಿಮ್ಮ ಶತ್ರುಭಯ ನಿವಾರಣೆಯಾಗುತ್ತದೆ.
5. ಹಾಲಿಲ್ಲಿ ಕಲ್ಲುಸಕ್ಕರೆ ಹಾಕಿ ಕರಗಿಸಿ ಅದಕ್ಕೆ ಸ್ವಲ್ಪ ಗಸಗಸೆ (ಗಾಂಜಾ) ಹಾಕಿಟ್ಟು ಶಿವಲಿಂಗಕ್ಕ ಪ್ರತಿದಿನ ಅಭಿಷೇಕ ಮಾಡಿದರೆ ಮನೆಯಲ್ಲಿ, ಮನಸ್ಸಲ್ಲಿ, ಜೀವನದಲ್ಲಿ ಶಾಂತಿ ನೆಲೆಸುತ್ತದೆ.
6. ಕಾಳಸರ್ಪಯೋಗವಿರುವ ವ್ಯಕ್ತಿ ಶ್ರಾವಣ ಮಾಸದಲ್ಲಿ ಪ್ರತಿದಿನ ರುದ್ರಾಭಿಷೇಕ ಹಾಗೂ ಮಹಾ ಮೃತ್ಯುಂಜಯ ಮಂತ್ರ ಜಪ ಮಾಡುತ್ತಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಶಾಂತಿ, ಸಮೃದ್ಧಿಯ ಧಾರಣೆಯಾಗುತ್ತದೆ.