Webdunia - Bharat's app for daily news and videos

Install App

ಯಾವ ಹೂವಿನಿಂದ ದೇವರನ್ನ ಪೂಜಿಸಿದರೆ ಏನು ಫಲ ಎಂಬುದು ತಿಳಿಬೇಕಾ?

Webdunia
ಶನಿವಾರ, 9 ಜೂನ್ 2018 (05:49 IST)
ಬೆಂಗಳೂರು : ದೇವರಿಗೆ ಭಕ್ತಿಯಿಂದ ಒಂದು  ಪುಷ್ಪವನ್ನು ಅರ್ಪಿಸಿದರೆ ಸಾಕು ಭಕ್ತರು ಬೇಡದಿದ್ದರೂ ವರ ನೀಡುತ್ತಾನೆ ದೇವರು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವು ಹೂಗಳಿಂದ ನಮ್ಮ ಇಷ್ಟದೈವಗಳನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತದೆಯಂತೆ. ಆ ಹೂಗಳು ಯಾವುವು, ಅವುಗಳಿಂದ ಪೂಜಿಸಿದರೆ ಸಿಗುವ ಫಲವೇನು ಎಂಬುದು ಇಲ್ಲಿದೆ ನೋಡಿ.

*ಸಂಪಿಗೆ ಹೂವನ್ನು ಸಮರ್ಪಿಸಿ ಪ್ರಸಾದ ಸ್ವೀಕರಿಸಿದರೆ ಮಾಟ ಮಂತ್ರ, ಕ್ಷುದ್ರ ವಿದ್ಯೆಗಳು ನಮ್ಮ ಮೇಲೆ ಪ್ರಭಾವ ಬೀರಲ್ಲ. ಶತ್ರು ನಿವಾರಣೆ ಸಾಧ್ಯವಾಗುತ್ತದೆಯಂತೆ.

 

*ಪಾರಿಜಾತ ಹೂಗಳಿಂದ ಅರ್ಚನೆ ಮಾಡಿದರೆ ಕಾಲ ಸರ್ಪದೋಷ ನಿವಾರಣೆಯಾಗುವುದಷ್ಟೇ ಅಲ್ಲ ಮನಶ್ಯಾಂತಿಯೂ ಲಭಿಸುತ್ತದೆಯಂತೆ.

 

*ಮಲ್ಲಿಗೆ ಹೂವುಗಳಿಂದ ಪೂಜಿಸಿದರೆ ಅಧಿಕಾರದಲ್ಲಿರುವವರ ಮನಸ್ತಾಪ ಕಡಿಮೆಯಾಗುತ್ತದೆ ಹಾಗೂ ರೋಗಗಳಿಂದ ವಿಮುಕ್ತಿ ಲಭಿಸಿ ಆರೋಗ್ಯ ಸಿದ್ಧಿಸುತ್ತದೆಯಂತೆ.

 

* ಕಮಲದ ಹೂವಿನಿಂದ ಅರ್ಚನೆ ಮಾಡಿದರೆ ದಾರಿದ್ರ್ಯ ನಿವಾರಣೆಯಾಗಿ, ಶ್ರೀಮಂತರಾಗುತ್ತಾರಂತೆ.

 

*ನೈದಿಲೆ ಹೂವಗಳಿಂದ ಪೂಜಿಸಿದರೆ ಮಂತ್ರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆಯಂತೆ.

 

*ತುಂಬೆ ಹೂವಿನಿಂದ ಶಿವನನ್ನು ಪೂಜಿಸಿದರೆ ಭಕ್ತಿ ಹೆಚ್ಚುತ್ತದೆಯಂತೆ.

 

*ನಂದಿಬಟ್ಟಲು ಹೂವಿಂದ ಶಿವನ ಪೂಜೆ ಮಾಡಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆಯಂತೆ.

 

*ಸೂರ್ಯಕಾಂತಿ ಹೂವನ್ನು ಪೂರ್ನಾಹುತಿಯಾಗಿ ಕೊಟ್ಟರೆ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ ಎನ್ನುತ್ತವೆ ಪುರಾಣಗಳು.

 

ಆದರೆ ಕನಕಾಂಬರದಿಂದ ಪೂಜೆ ಮಾಡಬಾರದು. ಆ ರೀತಿ ಮಾಡಿದರೆ ಜೀವನದಲ್ಲಿ ವೈರಾಗ್ಯ ಉಂಟಾಗುತ್ತದೆ ಎಂದು ಶಾಸ್ತ್ತಗಳು ಹೇಳುತ್ತವೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments