ಲಕ್ಷ್ಮಿಕಟಾಕ್ಷ ಸಿಗಬೇಕೆಂದರೆ ಈ 5 ವಸ್ತುಗಳನ್ನು ಪೂಜೆಯಲ್ಲಿ ಇಡಬೇಕಂತೆ

Webdunia
ಸೋಮವಾರ, 7 ಮೇ 2018 (06:38 IST)
ಬೆಂಗಳೂರು : ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮಿದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆಂದು, ಹಣ ಹರಿದು ಬರುತ್ತದೆಂದು ಬಹಳಷ್ಟು ಮಂದಿಯ ನಂಬಿಕೆ. ವ್ಯಾಪಾರಿಗಳಾದರೆ ತಮ್ಮ ಅಂಗಡಿಗಳಲ್ಲಿ, ಮಳಿಗೆಗಳಲ್ಲಿ, ಇತರೆ ಪ್ರದೇಶಗಳಲ್ಲಿ ಲಕ್ಷ್ಮಿದೇವಿಯ ಫೋಟೋವನ್ನು ಇಟ್ಟೇ ಇರುತ್ತಾರೆ. ಆ ರೀತಿ ಮಾಡಿದರೆ ವ್ಯಾಪಾರದಲ್ಲಿ ಚೆನ್ನಾಗಿ ಹಣ ಸಂಪಾದಿಸಬಹುದು ಎಂಬುದು ಅವರ  ನಂಬಿಕೆ. ಆದರೆ ಲಕ್ಷ್ಮಿ ಅನುಗ್ರಹ ಸಿದ್ದಿಸಬೇಕೆಂದರೆ ಪೂಜೆ ಮಾತ್ರವಲ್ಲ, ಇನ್ನೂ ಕೆಲವು ಕೆಲಸಗಳನ್ನೂ ಮಾಡಬೇಕಾಗಿರುತ್ತವೆ. ಆಗ ಆ ದೇವಿ ಕಟಾಕ್ಷ ಇನ್ನೂ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಿಕಟಾಕ್ಷಕ್ಕಾಗಿ ಏನೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

 
*ಒಂದು ನವಿಲು ಗರಿ ತಂದುಕೊಂಡು ಅದನ್ನು ನೀವು ಲಕ್ಷ್ಮಿ ದೇವಿಯನ್ನು ಪೂಜಿಸುವ ಬಳಿ ಇಡಬೇಕು. ಇದರಿಂದ ಆ ದೇವಿ ಅನುಗ್ರಹ ಸಿಗುತ್ತದೆ.

* ಬಂಗಾರ ಅಥವಾ ಬೆಳ್ಳಿಯಿಂದ ಮಾಡಿದ ನಾಣ್ಯವನ್ನು ಪೂಜಾಕೋಣೆಯಲ್ಲಿ ಇಡಬೇಕು. ಆ ನಾಣ್ಯದ ಮೇಲೆ ಲಕ್ಷ್ಮಿದೇವಿ, ವಿನಾಯಕ ಇದ್ದರೆ ಇನ್ನೂ ಒಳಿತು. ಇದರಿಂದ ಅಪಾರ ಸಂಪತ್ತು ಉಂಟಾಗುತ್ತದೆ.

*ತಾವರೆ ಹೂವು ಎಂದರೆ ಲಕ್ಷ್ಮಿದೇವಿಗೆ ಎಷ್ಟೋ ಇಷ್ಟ. ಆ ದೇವಿ ತಾವರೆ ಹೂವಿನ ಮೇಲೆ ಕುಳಿತುಕೊಳ್ಳುತ್ತದೆ ಆದಕಾರಣ ಇದರಿಂದ ಆಕೆಯನ್ನು ಪೂಜಿಸಿದರೆ ಎಲ್ಲಾ ಲಾಭಗಳೇ ಉಂಟಾಗುತ್ತವೆ.

*ಮಹಿಳೆಯರು ಹಣೆಗೆ ಧರಿಸುವ ಕುಂಕುಮ, ಕೈಗಳಿಗೆ ಧರಿಸುವ ಬಳೆ, ಗೋರಂಟಿಯಂತಹ ಹಲವು ವಿಧದ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಂತೆ. ಇದರಿಂದ ಅವರಿಗೆ ಒಳಿತಾಗಿ ಸಂಪತ್ತು ಸಿದ್ಧಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments