Webdunia - Bharat's app for daily news and videos

Install App

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ

Krishnaveni K
ಮಂಗಳವಾರ, 3 ಮಾರ್ಚ್ 2026 (08:37 IST)
ಬೆಂಗಳೂರು: ಇಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಗ್ರಹಣವಾಗಿದ್ದು ಭಾರತದಲ್ಲೂ ಗೋಚರವಾಗುತ್ತಿದೆ. ಎಷ್ಟು ಗಂಟೆಗೆ ನಮ್ಮ ರಾಜ್ಯದಲ್ಲಿ ಗೋಚರವಾಗುತ್ತದೆ, ಏನು ಮಾಡಬೇಕು ಇಲ್ಲಿದೆ ವಿವರ.

ಇಂದು ಹೋಳು ಹುಣ್ಣಿಮೆ ದಿನವೇ ಕೇತುಗ್ರಸ್ತ ಚಂದ್ರಗ್ರಹಣವಾಗುತ್ತಿರುವುದು ವಿಶೇಷವಾಗಿದೆ. ಕರ್ನಾಟಕದಲ್ಲಿ ಸಂಜೆ 6.26 ರಿಂದ 6.46 ರವರೆಗೆ ಗ್ರಹಣ ಗೋಚರವಾಗಲಿದೆ. ಶುಭ್ರ ಆಕಾಶವಿದ್ದಲ್ಲಿ ಇಂದು ಬರಿಗಣ್ಣಿನಿಂದ ಈ ಖಗೋಳ ವಿಸ್ಮಯವನ್ನು ನೋಡಬಹುದಾಗಿದೆ.

ಜ್ಯೋತಿಷ್ಯದ ಪ್ರಕಾರ ಗ್ರಹಣ ನಿಮಿತ್ತ ಇಂದು ಬೆಳಿಗ್ಗೆಯಿಂದಲೇ ಸೂತಕದ ಕಾಲ ಶುರುವಾಗುತ್ತದೆ. ಬಹುತೇಕ ದೇವಾಲಯಗಳು ಇಂದು ಮಧ್ಯಾಹ್ನವೇ ಬಾಗಿಲು ಮುಚ್ಚಲಿದ್ದು ರಾತ್ರಿ 7 ರ ನಂತರ ಬಾಗಿಲು ತೆಗೆಯಲಿದೆ. ಗ್ರಹಣ ಕಾರ್ಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿದೆ.

ಗ್ರಹಣದ ನಂತರ ಸ್ನಾನ ಮಾಡಿ ಶುದ್ಧರಾಗಿ ಆಹಾರ ಸೇವಿಸುವುದು ಸೂಕ್ತ. ವಿಶೇಷವಾಗಿ ಈ ಗ್ರಹಣ ಮೇಷ ರಾಶಿ ಮತ್ತು ಧನು ರಾಶಿಯವರಿಗೆ ಲಾಭದಾಯಕವಾಗಲಿದೆ. ಗ್ರಹಣದ ನಂತರ ಆರ್ಥಿಕವಾಗಿ, ವೃತ್ತಿ ಸಂಬಂಧವಾಗಿ ಲಾಭವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ ಪಠಣ ಮಾಡಿ

ಶನಿ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಶುಕ್ರವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಶ್ರೀ ಪಾಂಡುರಂಗ ಅಷ್ಟಕಂ ಸ್ತೋತ್ರಂ ತಪ್ಪದೇ ಪಠಿಸಿ

ಗುರು ಪೂರ್ಣಿಮೆ ಪೂಜೆ ವಿಧಾನ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments