Webdunia - Bharat's app for daily news and videos

Install App

ಆಂಜನೇಯನನ್ನು ಈ ರೂಪದಲ್ಲಿ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ

Webdunia
ಮಂಗಳವಾರ, 19 ಮಾರ್ಚ್ 2019 (06:40 IST)
ಬೆಂಗಳೂರು : ಆಂಜನೇಯ ಶಿವಾಂಶದಿಂದ ಜನಿಸಿದವನು. ಆತ ತುಂಬಾ ಬಲಶಾಲಿಯಾದವನು. ಮಂಗಳಕರನಾದ ಆತನನ್ನು ಭಕ್ತರು ಮಂಗಳವಾರದಂದು ಪೂಜಿಸಿ  ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆಂಜನೇಯ ಹಲವು ರೂಪವನ್ನು ಹೊಂದಿದ್ದು, ಆತನನ್ನು ವಿವಿಧ ರೂಪಗಳಲ್ಲಿ ಆರಾಧಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ.


ಪಾದಸ್ಪರ್ಷಿ ಹನುಮಾನ್ : ಇಲ್ಲಿ ಹನುಮಂತ ರಾಮನ ಪಾದ ಸ್ಪರ್ಷಿಸಿ ಆಶೀರ್ವಾದ ಪಡೆಯುತ್ತಾನೆ. ಪಾದಸ್ಪರ್ಷಿ ಹನುಮಂತನನ್ನು ಪೂಜಿಸಿದ್ರೆ ನಿಮ್ಮ ವೈಯಕ್ತಿಕ ಬದುಕು ಮತ್ತು ಉದ್ಯೋಗದಲ್ಲಿನ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ಸೂರ್ಯಮುಖಿ ಹನುಮಾನ್ : ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ. ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ.


ಮಹಾಬಲಿ ಹನುಮಾನ್ : ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿಯೂ, ಭಯರಹಿತನೂ ಹಾಗೂ ಯೋಧನೂ ಆಗಿರ್ತಾನೆ. ಲಂಕೆಯ ರಾಕ್ಷಸರನ್ನೆಲ್ಲ ಸಂಹರಿಸುತ್ತಾನೆ. ಮಹಾಬಲಿ ಹನುಮಾನ್ ನನ್ನು ಆರಾಧಿಸಿದರೆ ನಿಮ್ಮಲ್ಲಿರುವ ಭಯ ತೊಲಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.


ಭಕ್ತ ಹನುಮಾನ್ : ಈ ರೂಪದಲ್ಲಿ ಹನುಮಂತ ರಾಮನನ್ನು ಪೂಜಿಸುತ್ತಾನೆ. ಭಕ್ತ ಹನುಮಾನ್ ನನ್ನು ಆರಾಧಿಸುವುದರಿಂದ ನೀವು ಅತಿ ಶೀಘ್ರವಾಗಿ ಬದುಕಿನ ಗುರಿ ತಲುಪಬಹುದು.


ಉತ್ತರಮುಖಿ ಹನುಮಾನ್ : ದೇವರುಗಳೆಲ್ಲ ಉತ್ತರ ದಿಕ್ಕಿನಲ್ಲಿರುತ್ತಾರೆ ಎಂಬ ನಂಬಿಕೆ ಇದೆ. ಹನುಮಂತ, ಉತ್ತರಕ್ಕೆ ಮುಖಮಾಡಿರುವ ಮೂರ್ತಿಯನ್ನು ಇಟ್ಟು ಪೂಜಿಸುವುದರಿಂದ ಎಲ್ಲಾ ದೇವರ ಕೃಪೆಯೂ ನಿಮಗೆ ದೊರೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments