ಈ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಮನೆಗೆ ಅಶುಭ

Webdunia
ಬುಧವಾರ, 13 ಡಿಸೆಂಬರ್ 2017 (06:57 IST)
ಬೆಂಗಳೂರು: ನಮ್ಮ ಹಿಂದು ಶಾಸ್ತ್ರ ಪೂಜೆಗೆ ಬಳಸುವ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಅದು ಪೂಜೆಗೆ ಅರ್ಹವಲ್ಲಎಂದು ಹೇಳುತ್ತದೆ. ಹಾಗೆಯೇ ಅದರ  ಜೊತೆ ಈ ವಸ್ತುಗಳನ್ನು ಯಾವ ಸಂದರ್ಭದಲ್ಲಿಯು ನೆಲದ ಮೇಲೆ ಇಡಬಾರದು. ಒಂದು ವೇಳೆ ಇಟ್ಟರೆ ಅಲ್ಲಿ ಅಶುಭ ಉಂಟಾಗಿ ದಾರಿದ್ಯ ಮನೆ ಮಾಡುತ್ತದೆ.


ಮೊದಲನೆಯದಾಗಿ ಶಿವಲಿಂಗವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಹೀಗೆ ಇಟ್ಟರೆ ತುಂಬಾ ಸಮಸ್ಯೆಗಳು ಎದುರಾಗುತ್ತದೆ. ಅದನ್ನು ಮಣೆಯ ಮೇಲೆ ಇಡಬೇಕು. ಎರಡನೇಯದಾಗಿ ದೀಪವನ್ನು ಹಚ್ಚಿ ನೆಲದ ಮೇಲೆ ಇಡಬಾರದು. ಇದರಿಂದ ದೇವರಿಗೆ ಅವಮಾನವಾಗುತ್ತದೆ ಎಂದು ಹೇಳುತ್ತಾರೆ. ಮೂರನೇಯದಾಗಿ ಹಿಂದೂ ಸಂಪ್ರದಾಯದಲ್ಲಿ ಜನೀವಾರವನ್ನು ಹಾಕುವ ಪದ್ಧತಿ ಇದೆ. ಜನೀವಾರವನ್ನು ನೆಲದ ಮೆಲೆ ಇಡಬಾರದು. ಒಂದು ವೇಳೆ ಇಟ್ಟರೆ ತಂದೆ, ತಾಯಿ ಹಾಗು ಗುರುವಿಗೆ  ಅವಮಾನ ಮಾಡಿದಂತೆ ಎಂದು ಹೇಳುತ್ತಾರೆ.


ನಾಲ್ಕನೇಯದಾಗಿ ಶಂಖದಲ್ಲಿ ಲಕ್ಷ್ಮೀದೇವಿ ನೆಲೆಸಿರುವುದರಿಂದ  ಅದನ್ನು ನೆಲದ ಮೇಲೆ ಇಡಬಾರದು. ಇಟ್ಟರೆ ಲಕ್ಷ್ಮೀ ಕೋಪಗೊಂಡು ಮನೆಯಿಂದ ಹೊರಟು ಹೋಗುತ್ತಾಳೆ ಎನ್ನುತ್ತಾರೆ. ಐದನೇಯದಾಗಿ ಬಂಗಾರವನ್ನು ನೆಲದಮೇಲೆ ಇಡಬಾರದು. ಬಂಗಾರವೆನ್ನುವುದು ಲಕ್ಷ್ಮೀಯ ಸ್ವರೂಪವಾದ್ದರಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments