Webdunia - Bharat's app for daily news and videos

Install App

ಯಾವುದೇ ಸಂದರ್ಭದಲ್ಲಿದ್ದರೂ ಕೂಡ ಈ ವೇಳೆ ಮಾತ್ರ ಕಾಲು ತೊಳೆಯುವುದನ್ನು ಮರೆಯಬೇಡಿ. ಯಾಕೆ ಗೊತ್ತಾ?

Webdunia
ಸೋಮವಾರ, 28 ಜನವರಿ 2019 (06:26 IST)
ಬೆಂಗಳೂರು : ಕೆಲವು ಜನರಿಗೆ ಕಾಲಿಗೆ ನೀರು ಹಾಕುವುದೆಂದರೆ ಆಗುವುದಿಲ್ಲ. ಆದರೆ ಕಾಲುಗಳನ್ನು ತೊಳೆಯುವುದರಿಂದಲೂ ಸಾಕಷ್ಟು ಲಾಭಗಳಿವೆ ಎಂಬುದನ್ನು ಅಂತವರು ಮೊದಲು ತಿಳಿದಿರಲೇಬೇಕು. ಹೌದು. ಕೆಲವೊಂದು ಕೆಲಸಗಳನ್ನು ಮಾಡುವಾಗ ಕಾಲುಗಳನ್ನು ತೊಳೆದ್ರೆ ಉತ್ತಮ ಫಲಿತಾಂಶ ಪ್ರಾಪ್ತಿಯಾಗಲಿದೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊರಗಿನಿಂದ ಬಂದ ನಂತರ ಕಾಲುಗಳನ್ನು ತೊಳೆದು ಒಳಗೆ ಹೋದರೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಲಾಗಿದೆ. ಹಾಗೇ ವಿಜ್ಞಾನ  ಕೂಡ ಹೀಗೆ ಹೇಳುತ್ತದೆ. ಕಾರಣ ಕಾಲುಗಳಿಗೆ ಕೆಸರು, ಧೂಳು ಸೇರಿಕೊಂಡಿರುತ್ತದೆ. ಅದು ಮನೆಯೊಳಗೆ ಹರಡಿ ಬೇರೆ ಬೇರೆ ರೋಗಗಳಿಗೆ ಕಾರಣವಾಗಬಹುದು.


ಏಕಾಗ್ರತೆಯಿಂದ ದೇವರನ್ನು ಪೂಜಿಸಿದರೆ ಬೇಗ ಫಲ ದೊರೆಯುತ್ತದೆ ಎನ್ನುತ್ತಾರೆ. ಈ ಏಕಾಗ್ರತೆ ಮೂಡಬೇಕೆಂದರೆ ಪೂಜೆಗಿಂತ ಮೊದಲು ಕಾಲು ತೊಳೆಯಬೇಕು. ಹಾಗೇ ಯೋಗ ಮಾಡುವ ಮೊದಲು ಕಾಲು ತೊಳೆಯಬೇಕು. ಇದರಿಂದ ಸಕಾರಾತ್ಮಕ ಚಿಂತನೆ ವೃದ್ಧಿಯಾಗಿ ಶಕ್ತಿ ಪ್ರಾಪ್ತವಾಗುತ್ತದೆ.


ರಾತ್ರಿ ಹಾಸಿಗೆಗೆ ಹೋಗುವ ಮೊದಲು ಕಾಲು ತೊಳೆಯಬೇಕು. ಕಾಲು ತೊಳೆಯುವುದರಿಂದ ಶರೀರದಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದರಿಂದ ಸುಖಕರ ನಿದ್ರೆ ನಿಮ್ಮದಾಗುತ್ತದೆ. ಕೆಟ್ಟ ಕನಸು ಕೂಡ ಬೀಳುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments