Webdunia - Bharat's app for daily news and videos

Install App

ಜೈನ ಧರ್ಮದ ಕೊಡುಗೆಗಳು

ಇಳಯರಾಜ
ಜೈನ ಧರ್ಮವು ಒತ್ತುಕೊಟ್ಟು ಬೋಧಿಸಿದ ಅಹಿಂಸಾ ತತ್ವವು ಭಾರತೀಯ ಸಂಸ್ಕ್ಕತಿಯ ಮೂಲಭೂತ ಸಿದ್ದಾಂತವಾಗಿ ಇಂದಿಗೂ ಉಳಿದುಕೊಂಡಿದೆ. ಅಹಿಂಸೆ ಎಂಬ ಸಿದ್ದಾಂತದಿಂದಾಗಿ ಯಜ್ಞಯಾಗಾದಿಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ನಿಂತಿತು.

ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದರಿಂದಾಗಿ ವಿವಿಧ ಕೆಳವರ್ಗದ ಜನರು ಜೈನ ಧರ್ಮದಲ್ಲಿ ಸಮಾನತೆ ಕಂಡುಕೊಂಡರು. ಇದರಿಂದಾಗಿ ವೈದಿಕ ಧರ್ಮದಲ್ಲೂ ಸುಧಾರಣಾ ಪ್ರಕ್ರಿಯೆಗಳುಂಟಾಗಿ ಹಿಂದೂ ಧರ್ಮವು ಶುದ್ದಿಗೊಂಡಿತು. ಈ ಧರ್ಮದ ತತ್ವವಾದ ಸಂಪತ್ತನ್ನು ಸಂಗ್ರಹಿಸಬಾರದೆಂಬ ಅಂಶವು ಜನರಲ್ಲಿ ಮಾನವ ಜನಾಂಗಕ್ಕೆ ಕಲ್ಯಾಣಕಾರಕವಾದ ಕಾರ್ಯಗಳಿಗೆ ದಾನ ಮಾಡಬೇಕೆಂಬ ಮನೋಭಾವನೆಯನ್ನು ಬೆಳೆಸಿತು.

ವಾಸ್ತುಶಿಲ್ ಪ, ಶಿಲ್ಪಕಲೆ ಮತ್ತು ಚಿತ್ರಕಲೆಗಳಲ್ಲಿ ಜೈನ ಧರ್ಮದ ಕೊಡುಗೆಯನ್ನು ನೋಡಬಹುದು. ಜೈನ ಭಿಕ್ಷುಗಳಿಗಾಗಿ ನಿರ್ಮಿಸಿದ ಅನೇಕ ಭಿಕ್ಷುಗೃಹಗಳು ದೇಶದ ಅನೇಕ ಭಾಗಗಳಲ್ಲಿ ಇನ್ನೂ ಉಳಿದಿವೆ. ಜೈನ ದೇವಾಲಯಗಳನ್ನು ವಸತಿ ಅಥವಾ ಬಸದಿ ಎಂದು ಕರೆಯುತ್ತಾರೆ.

ಬಸದಿಗಳು ಕರ್ನಾಟಕದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಈ ಬಸದಿಗಳಲ್ಲಿ ವಾಸ್ತು ಶಿಲ್ಪಗಳು ಊರ್ಜಿತವಾದವು. ಇಂಥ ವಿಗ್ರಹಗಳಲ್ಲಿ ಜಗದ್ವಿಖ್ಯಾತವಾದ ಶ್ರವಣಬೆಳಗೊಳದ ಬಾಹುಬಲಿಯ 58 ಅಡಿ ಎತ್ತರದ ಶಿಲಾ ವಿಗ್ರಹವೂ ಒಂದು. ಇದನ್ನು ಗಂಗರಾಜರ ಮಂತ್ರಿಯಾಗಿದ್ದ ಚಾವುಂಡರಾಯನು ಕೆತ್ತಿಸಿದನು.

ಉದಯಗಿರಿಯ ಹುಲಿಗುಹ ೆ, ಎಲ್ಲೌರಾದ ಇಂದ್ರಸಭೆ ಗುಹ ೆ, ಪುಲಿತಾ ನ, ಮೌಂಟ್ ಅಬು ಪರ್ವ ತ, ಬುಂದೇಲ್ ಬಂಡದ ಖಜುರಾಹ ೊ, ಚಿತ್ತೂರಿನ ಬಳಿಯಿರುವ ಆದಿನಾಥ ದೇಗು ಲ, ಒರಿಸ್ಸಾದ ಹಾಧಿಕುಂಫಾ ಗುಹಾಂತರ ದೇವಾಲಯ ಮುಂತಾದ ಕಡೆ ಜೈನರ ವಾಸ್ತುಶಿಲ್ಪದ ಅಮೋಘ ಕಾಣಿಕೆಗಳನ್ನುಕಾಣಬಹುದು.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments