Webdunia - Bharat's app for daily news and videos

Install App

ಶಿವ ಜಡೆಯಿಂದ ಮಧುಸುರಿಸಿದ ಮಧುರೈ

ಇಳಯರಾಜ
PTI
ಭಾರತದಲ್ಲಿ ದಕ್ಷಿಣದ ಆಥೆನ್ಸ್‌ ಎಂದು ಗುರುತಿಸಲ್ಪಡುವ ತಮಿಳ್ನಾಡಿನ ಪವಿತ್ರ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಮಧುರೈ ಪ್ರಸಿದ್ಧವಾಗಿದೆ.

ಮಧುರೆಯ ಕುರಿತು ಅನೇಕ ಐತಿಹ್ಯಗಳಿವೆ. ಇವುಗಳಲ್ಲೊಂದು ಇಂತಿದೆ. ಈ ಪ್ರದೇಶದಲ್ಲಿ ಬಹಳ ಹಿಂದೆ ಕದಂಬ ವನವಿತ್ತು. ಒಂದುದಿನ ಧನಂಜಯ ಎಂಬ ರೈತ ಅಲ್ಲೆ ಹಾದು ಹೋಗುತ್ತಿದ್ದಾಗ ದೇವೆಂದ್ರನು ಸ್ವಯಂಭೂ ಲಿಂಗವೊಂದನ್ನು ಪೂಜಿಸುವುದವನ್ನು ಕಂಡನು. ರೈತನು ಈ ಮಾಹಿತಿಯನ್ನು ನಾಡಿನ ರಾಜ ಕುಲಶೇಖರ ಪಾಂಡ್ಯನಿಗೆ ತಿಳಿಸಿದನು.

ಕುಲಶೇಖರ ಪಾಂಡ್ಯನು ಸ್ವಯಂಭೂ ಶಿವಲಿಂಗವಿದ್ದ ಪ್ರದೇಶವನ್ನು ಶುಚಿಗೊಳಿಸಿ ಅಲ್ಲೊಂದು ದೇವಸ್ಥಾನವನ್ನು ನಿರ್ಮಿಸಿದನು. ಒಂದು ಸಲ ಸ್ವತಹ ಪರಮಶಿವನೇ ಈ ದೇವಸ್ಥಾನವನ್ನು ವೀಕ್ಷಿಸಿ ತನ್ನ ಜಟಾಜೂಟವನ್ನು ಬಿಡಿಸಿ ಜೇನಿನ ಮಳೆಗರೆದನು. ಇದರಿಂದಾಗಿ ದೇವಸ್ಥಾನಕ್ಕೆ ಮಧುರೈ ಎಂಬ ಹೆಸರಾಯಿತು. ಈ ದೇವಸ್ಥಾನವನ್ನು ಕೇಂದ್ರವಾಗಿರಿಸಿ ಬಳಿಕ ನಗರೀಕರಣವಾಯಿತು.

ಮುಧುರೈಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಶಿವನ ವಿಳಯಾಟ್ಟಂ (ವಿಸ್ಮಯಗಳು)ಗಳನ್ನು 64 ವಿಧಾನಗಳಲ್ಲಿ ಇಲ್ಲಿ ಚಿತ್ರಿಸಲಾಗಿದೆ. ಧಾರ್ಮಿಕವಾಗಿ , ಆಧ್ಯಾತ್ಮಿಕವಾಗಿ ವಿಶಿಷ್ಟವಾಗಿರುವಂತೆಯೇ ಈ ದೇವಸ್ಥಾನ ಸಂಸ್ಕೃತಿ ಪರಂಪರೆಗಳಿಗೂ ಮಹತ್ವಪಡೆದಿದೆ.

ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಯಾತ್ರಿಕ ಮೆಗಸ್ತನೀಸ್‌ ಮಧುರೆಗೆ ಭೇಟಿ ನೀಡಿದ್ದನು. ಆ ಬಳಿಕ ಗ್ರೀಸ್‌ ಮತ್ತು ರೋಂಗಳಿಂದ ವರ್ತಕರು ಆಗಮಿಸಿ ಅಲ್ಲಿನ ಪಾಂಡ್ಯ ದೊರೆಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು.

ಮಧುರೈ ಕ್ರಿಸ್ತಶಕ 10ನೇ ಶತಮಾನದವರೆಗೂ ವೈಭವೋಪೇತವಾಗಿತ್ತು. ಆದರೆ ಮಧುರೆಯನ್ನು ಪಾಂಡ್ಯರ ಶತ್ರುಗಳಾದ ಚೋಳರು ವಶಪಡಿಸಿದುದರಿಂದ ತನ್ನ ವೈಭವವನ್ನು ಕಳಕೊಂಡಿತು. ಆ ಬಳಿಕ ಚೋಳರು, ಹಂಪೆಯ ವಿಜಯನಗರ ಅರಸರು, ನಾಯಕ ದೊರೆಗಳು ಆಳಿದರು. ತಿರುಮಲ ನಾಯಕನ ಕಾಲದಲ್ಲಿ ದೇವಸ್ಥಾನ ಮತ್ತೆ ಸಮೃದ್ಧಿಯಿಂದ ಕಂಗೊಳಿಸಿತು.ಕೊನೆಗೆ ಬ್ರಿಟಿಷರ ಸ್ವಾಧೀನಕ್ಕೆ ಬಂದಿತು .

ಸ್ವಾತಂತ್ರ್ಯಾನಂತರ ತಮಿಳ್ನಾಡು ಸರಕಾರದ ಆಡಳಿತಕ್ಕೊಳಪಟ್ಟಿತು. ಮಧುರೈ ಪ್ರದೇಶವು ಯಾನಮಲೈ( ಆನೆಪರ್ವತ), ನಾಗಮಲೈ(ಸರ್ಪಪರ್ವತ), ಪಶುಮಲೈ(ಬಸವಪರ್ವತ)ಗಳಿಂದ ಸುತ್ತುವರಿಯಲ್ಪಟ್ಟಿದೆ. ಜಾಜಿ ಮಲ್ಲಿಗೆ ಹೂವಿಗೆ ಪ್ರಸಿದ್ಧವಾಗಿದೆ.ದೇಶದ ಇತರ ಭಾಗಗಳಿಗೂ ಇಲ್ಲಿಂದ ಹೂವು ಸರಬರಾಜಾಗುತ್ತಿದೆ.

- ವಿಷ್ಣು ಭಾರದ್ವಾಜ್

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಅಕ್ಷಯ ತೃತೀಯ ದಿನದ ಮಹತ್ವವೇನು ಎಂಬ ಮಾಹಿತಿ ಇಲ್ಲಿದೆ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

Show comments