ಮಾನವ ಜೀವನವೇ ಪವಿತ್ರ : ಸದ್ಗುರು

Webdunia
ಸೋಮವಾರ, 17 ಅಕ್ಟೋಬರ್ 2011 (16:03 IST)
WD
ಅಸಮಾಧಾನ, ಕ್ರೋಧ, ದ್ವೇಷ ಇವುಗಳು ನೀವು ಸೇವಿಸುತ್ತಿರುವ ವಿಷಗಳು; ಇದರಿಂದ ಬೇರೆಯವರು ಸಾಯಬೇಕೆಂದು ಅಪೇಕ್ಷಿಸುವಿರಿ, ಆದರೆ ಜೀವನ ಹಾಗೆ ನಡೆಯುವುದಿಲ್ಲ. - ಸದ್ಗುರು.

ನೀವು ಯಾವುದನ್ನೇ ಆಗಲಿ ತೀವ್ರತೆಯಿಂದ ಬೆನ್ನಟ್ಟಿ ಹೋಗಬೇಕಿಲ್ಲ; ಒಂದು ಜೀವವಾಗಿ ನೀವು ಹೆಚ್ಚು ತೀವ್ರವಾಗಬೇಕು. - ಸದ್ಗುರು.

ಭೂಮಿಯ ಮೇಲಿನ ಉಳಿದೆಲ್ಲಾ ಜೀವಿಗಳಿಗೆ ನಾವು ಮಾಡಬಹುದಾದ ಮಹತ್ತಾದ ಉಪಕಾರವೆಂದರೆ ನಮ್ಮ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುವುದು. - ಸದ್ಗುರು.

ಈ ಮಾನವ ವ್ಯವಸ್ಥೆಯು ಕೆಲಸ ಮಾಡುವುದರ ಕಡೆಗೆ, ಸ್ವಲ್ಪ ಗಮನ ಹರಿಸಲು ಇಚ್ಛಿಸಿದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ಪರಮಾನಂದವನ್ನು ಹೊಂದುವ ಸಾಧ್ಯತೆ ಇದೆ. - ಸದ್ಗುರು.

ನಾವು ಯೋಗ ಎಂದು ಹೇಳಿದಾಗ, ಅದು ನಿಮ್ಮ ಶಕ್ತಿ-ಚೈತನ್ಯಗಳು, ಬಲವಂತವಿಲ್ಲದೆ, ನಿಮ್ಮ ಅಯ್ಕೆಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ಒಂದು ತಂತ್ರಜ್ಞಾನ. - ಸದ್ಗುರು.

ನೀವು ಮಾಡುವ ಕ್ರಿಯೆಯಲ್ಲಿ ಪರಿಪೂರ್ಣವಾಗಿ ನಿಷ್ಠರಾದಾಗ ಮಾತ್ರ, ಈ ಪ್ರಪಂಚದಲ್ಲಿ ಏನಾದರೂ ಮಹತ್ವಪೂರ್ಣವಾದುದನ್ನು ಮಾಡಬಹುದು. - ಸದ್ಗುರು.

ಸಮಸ್ತ ಜೀವಜಂತುಗಳಲ್ಲಿ, ಮಾನವ ಜೀವಿ ಮಾತ್ರ ಭೌತಿಕವಾದುದನ್ನೂ ಮೀರಿದ ಆಯಾಮಗಳನ್ನು ಪರಿಶೋಧಿಸಿ ಅರಿಯಬಲ್ಲ. - ಸದ್ಗುರು.

ಕರುಣೆ, ಶಾಂತತೆ, ಪ್ರೇಮದಿಂದಿರಲು ಯಾವುದೇ ಆಧ್ಯಾತ್ಮಿಕ ಬೋಧನೆಯ ಅಥವಾ ಅಭ್ಯಾಸದ ಅಗತ್ಯವಿಲ್ಲ, ಅದೊಂದು ಸಾಧಾರಣವಾದ ಅರಿವು.- ಸದ್ಗುರು.

ಮಾನವಜೀವಿಯಾದ ನೀವೇ ಒಂದು ಮಹತ್ತರವಾದ ಪವಿತ್ರಗ್ರಂಥ. ಬದುಕಿನಲ್ಲಿ ನೀವು ಅಗತ್ಯವಾಗಿ ತಿಳಿಯಬೇಕಾದುದೆಲ್ಲವನ್ನೂ ಇದರಲ್ಲಿ ಬರೆದಿಡಲಾಗಿದೆ. - ಸದ್ಗುರು.

ಪವಿತ್ರ ಹಾಗೂ ಪಾಪ ಎನ್ನವುದು, ಒಂದೇ ಕೆಲಸವನ್ನು ಎರಡು ವಿಧಾನದಲ್ಲಿ ಮಾಡುವುದಾಗಿದೆ. ಬದುಕಿನ ಪ್ರತಿಯೊಂದು ಅಂಶವನ್ನೂ, ಪ್ರತಿಯೊಂದು ಉಸಿರನ್ನೂ ಪವಿತ್ರಗೊಳಿಸಬಹುದು ಅಥವಾ ಪಾಪಭರಿತವಾಗಿಸಬಹುದು. - ಸದ್ಗುರು.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

Show comments