ಹಿಮೋಗ್ಲೋಬಿನ್ ಕಡಿಮೆ, ಕೊರತೆಯಾದಲ್ಲಿ ಹೀಗೆ ಮಾಡಿ

ದೇಹದಲ್ಲಿ ರಕ್ತದ ಕೊರತೆ ಇದ್ದಾಗ ರಕ್ತಹೀನತೆ ಸಮಸ್ಯೆ ಕಂಡು ಬರುತ್ತದೆ. ಈ ರಕ್ತಹೀನತೆ ಸಮಸ್ಯೆ ಉಂಟಾದಾಗ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಅಥವಾ ಕೊರತೆ ಉಂಟಾಗುತ್ತದೆ. ಹಾಗೂ ಕೆಂಪು ರಕ್ತ ಕಣಗಳು ಕಡಿಮೆ ಆಗಲು ಶುರುವಾಗುತ್ತದೆ. ಹೀಗಾಗಿ ಸ್ವಲ್ಪ ಕೆಲಸ ಮಾಡಿದರೂ, ನಡೆದರೂ ಸುಸ್ತಾಗುವುದು, ದಣಿವು, ತಲೆನೋವು, ಎದೆನೋವು, ತಲೆಸುತ್ತು, ಕೈಕಾಲು ನಡುಗುವುದು, ತಣ್ಣಗಾಗುವುದು, ಮರಗಟ್ಟುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

photo credit social media

ರಕ್ತಹೀನತೆ ಸಮಸ್ಯೆಯನ್ನು ಸಮಯಕ್ಕೆ ನಿಯಂತ್ರಿಸದೇ ಹೋದರೆ ಇದು ಇತರೆ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಇಲ್ಲಿ ನಾವು ರಕ್ತಹೀನತೆ ಸಮಸ್ಯೆಗೆ ಪರಿಹಾರ ನೀಡುವ ಆಹಾರಗಳ ಬಗ್ಗೆ ತಿಳಿಯೋಣ.

ಜೀರ್ಣಾಂಗ ವ್ಯವಸ್ಥೆಯ ಅಸಮತೋಲನದಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಭಾರತೀಯ ಯೋಗ ಗುರು ಡಾ. ಹಂಸಜಿ ಯೋಗೇಂದ್ರ ಅವರು ರಕ್ತಹೀನತೆ ತೊಂದರೆ ತಪ್ಪಿಸಲು ಕೆಲವು ಪ್ರಮುಖ ಆಹಾರಗಳ ಬಗ್ಗೆ ಹೇಳಿದ್ದಾರೆ.

ಕಬ್ಬಿಣ, ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ತಾಮ್ರವು ಜೇನುತುಪ್ಪದಲ್ಲಿದೆ. ನಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್ ಹಣ್ಣುಗಳಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ. ಇದು ದೇಹದಲ್ಲಿ ಕಬ್ಬಿಣದ ಪ್ರಮಾಣ ಇರಿಸುತ್ತದೆ. ಇದು ರಕ್ತಹೀನತೆ ಸ್ಥಿತಿ ತಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ರಸ ಕುಡಿದರೆ ಉತ್ತಮ.

ನಿಯಮಿತವಾಗಿ ಒಂದು ಗ್ಲಾಸ್ ಬೀಟ್ರೂಟ್ ರಸ ಸೇವಿಸುವುದು ರಕ್ತಹೀನತೆ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಬೀಟ್ರೂಟ್ ಕಬ್ಬಿಣ, ಕ್ಯಾಲ್ಸಿಯಂ ಅತ್ಯುತ್ತಮ ಮೂಲ. ಬೀಟ್ರೂಟ್ನಲ್ಲಿರುವ ಹಳದಿ ಪೋಷಕಾಂಶಗಳು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ. ಕೆಂಪು ರಕ್ತ ಕಣಗಳು ರೂಪುಗೊಳ್ಳುತ್ತವೆ. ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ರಕ್ತಹೀನತೆ ತೊಡೆದು ಹಾಕಲು ಪಾಲಕ್ ಹಾಗೂ ಹಸಿರು ಸೊಪ್ಪು ತರಕಾರಿ ಸೇವಿಸಿ. ಕಬ್ಬಿಣಾಂಶ ಹೇರಳವಾಗಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಕಾಪಾಡುತ್ತದೆ. ಕೆಂಪು ರಕ್ತ ಕಣಗಳು ಸುಧಾರಿಸುತ್ತವೆ. ಪಾಲಕನ್ನು ರಸ, ಸಲಾಡ್ ಮತ್ತು ತರಕಾರಿ ರೂಪದಲ್ಲಿ ಸೇವಿಸಿ.

ಒಣದ್ರಾಕ್ಷಿ ಕಬ್ಬಿಣ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ಕಬ್ಬಿಣವನ್ನು ನಿರ್ವಹಿಸುತ್ತದೆ. ಹಾಗಾಗಿ ನೀವು ಖರ್ಜೂರ ಮತ್ತು ಒಣದ್ರಾಕ್ಷಿಗಳನ್ನು ಉಪಹಾರ ಮತ್ತು ತಿಂಡಿಗಳಲ್ಲಿ ಸೇವನೆ ಮಾಡಿ.

ದಾಳಿಂಬೆ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ದಾಳಿಂಬೆಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣದ ಜೊತೆಗೆ ಹಲವು ಪೋಷಕಾಂಶಗಳಿವೆ. ದಾಳಿಂಬೆಯಲ್ಲಿ ಆಸ್ಕೋರ್ಬಿಕ್ ಆಮ್ಲವಿದೆ. ದೇಹದಲ್ಲಿ ಆಸ್ಕೋರ್ಬಿಕ್ ಆಮ್ಲದ ಪ್ರಮಾಣ ರಕ್ತದ ಕಬ್ಬಿಣದ ಮಟ್ಟ ಹೆಚ್ಚಿಸುತ್ತದೆ. ಪಪ್ಪಾಯಿ, ಕಲ್ಲಂಗಡಿ ಇತ್ಯಾದಿಗಳು ಕಬ್ಬಿಣದ ಉತ್ತಮ ಮೂಲ.

ಈ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು

Follow Us on :-