Select Your Language

Notifications

webdunia
webdunia
webdunia
webdunia

11 ವರ್ಷದ ಬಾಲಕಿ ಮೇಲಿನ ರೇಪ್, ಕೊಲೆ ಕೇಸ್‌ನಲ್ಲಿ , ನಮ್ಮ ಮನೆಗೆ ಆತನ ಮೃತದೇಹ ಬರುವುದು ಬೇಡ

rape case
ಕೋಲ್ಕತ್ತಾದ ಬರುಯಿಪುರ ಉಪನಗರದಲ್ಲಿ 11 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಪ್ರಭಾಸ್‌ ಮೊಂಡಲ್‌ ಅಂತಮ ವಿಧಿವಿಧಾನದಲ್ಲಿ ಭಾಗಿಯಾಗಲ್ಲ ಎಂದು ಆತನ ತಾಯಿ ಸಂಧ್ಯಾ ಮೊಂಡಲ್ ಹೇಳಿದ್ದಾರೆ.

ನಮ್ಮ ಮನೆಯಿಂದ ಆತನಿಗೆ ಅಂತಿಮ ವಿದಾಯ ಸಿಗುವುದಿಲ್ಲ. ಯಾಕೆಂದರೆ ಆತ ಯಾವುದೇ ಒಳ್ಳೆಯ ಕೆಲಸ ಮಾಡಿ ಮೃತಪಟ್ಟಿಲ್ಲ .  ಹೀಗಾಗಿ ಆತನ ಮೃತದೇಹವು ಕೊನೆಯ ಬಾರಿಗೂ ನಮ್ಮ ಮನೆಗೆ ಬರುವುದನ್ನು ನಾವು ಬಯಸುತ್ತಿಲ್ಲ ಎಂದು ಸಂಧ್ಯಾ ಮೊಂಡಾಲ್ ಹೇಳಿದರು. 


"ನನ್ನ ಮಗ ಮಾಡಿದ ಕೆಲಸಕ್ಕೆ ಶಿಕ್ಷೆ ಅನುಭವಿಸಿದ್ದಾನೆ. ನಾನು ಆತನ ಮೃತದೇಹವನ್ನು ಸ್ವೀಕರಿಸುವುದಿಲ್ಲ. ಆತನ ಮೃತದೇಹವನ್ನು ನಮ್ಮ ಮನೆಗೆ ತರುವುದಿಲ್ಲ. ಆತ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಆತ ತಪ್ಪು ಮಾಡಿದ್ದ ಮತ್ತು ಅದಕ್ಕೆ ಶಿಕ್ಷೆ ಪಡೆದಿದ್ದಾನೆ. ಅವನನ್ನು ಕೊಲ್ಲಿರಿ ಅಥವಾ ನಿಮಗೆ ಬೇಕಾದುದನ್ನು ಮಾಡಿ; ನನಗೆ ಯಾವುದೇ ಅಭ್ಯಂತರವಿಲ್ಲ," ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗ್ಯ ವ್ಯಕ್ತಿ ಮೇಲ್ಮನೆಗೆ ಆಯ್ಕೆಯಾಗಲಿ: ವಿಜಯೇಂದ್ರ