Select Your Language

Notifications

webdunia
webdunia
webdunia
webdunia

ಗಲ್ಲು ತಪ್ಪಿಸಲು ಕೊನೆಯ ಪ್ರಯತ್ನ ನಡೆಸುತ್ತಿರುವ ನಿರ್ಭಯಾ ಅಪರಾಧಿಗಳು

ಗಲ್ಲು ತಪ್ಪಿಸಲು ಕೊನೆಯ ಪ್ರಯತ್ನ ನಡೆಸುತ್ತಿರುವ ನಿರ್ಭಯಾ ಅಪರಾಧಿಗಳು
ನವದೆಹಲಿ , ಮಂಗಳವಾರ, 14 ಜನವರಿ 2020 (09:43 IST)
ನವದೆಹಲಿ: 2012 ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲು ಕೆಲವೇ ದಿನ ಬಾಕಿಯುಳಿದಿದ್ದು ಈ ನಡುವೆ ತಮ್ಮ ಶಿಕ್ಷೆ ತಪ್ಪಿಸಲು ಇಬ್ಬರು ಅಪರಾಧಿಗಳು ಕೊನೆಯ ಪ್ರಯತ್ನ ನಡೆಸಿದ್ದಾರೆ.


ನಾಲ್ವರು ಆರೋಪಿಗಳ ಪೈಕಿ ವಿನಯ್ ಶರ್ಮ ಮತ್ತು ಮುಕೇಶ್ ಕುಮಾರ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಐವರು ನ್ಯಾಯಾಧೀಶರ ಪೀಠ ಈ ಅರ್ಜಿ ವಿಚಾರಣೆ ನಡೆಸಲಿದೆ.

ಇದು ಶಿಕ್ಷೆ ತಪ್ಪಿಸಿಕೊಳ್ಳಲು ಮರಣದಂಡನೆಗೊಳಗಾದ ಅಪರಾಧಿಗಳಿಗಿರುವ ಕೊನೆಯ ಆಯ್ಕೆಯಾಗಿದೆ. ಮೂಲಗಳ ಪ್ರಕಾರ ಈ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಜನವರಿ 22 ರಂದು ನಾಲ್ವರು ಅಪಾರಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ದೆಹಲಿ ಕೋರ್ಟ್ ತೀರ್ಪು ನೀಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪರ್ವೇಜ್ ಮುಶರಫ್ ಗೆ ವಿಧಿಸಿದ ಮರಣದಂಡನೆ ರದ್ದು