Webdunia - Bharat's app for daily news and videos

Install App

ಜಮ್ಮು-ಕಾಶ್ಮೀರ, ರಾಜಸ್ಥಾನದಲ್ಲಿ 5.7 ತೀವ್ರತೆಯ ಭೂಕಂಪನ

Webdunia
ಸೋಮವಾರ, 21 ಮಾರ್ಚ್ 2011 (16:29 IST)
ಜಪಾನ್ ಸುನಾಮಿ ಭೀತಿ ಮತ್ತು ಸೂಪರ್ ಮೂನ್ ವದಂತಿಗಳು ಜನತೆಯನ್ನು ಹೈರಾಣಾಗಿಸಿದ ಬೆನ್ನಿಗೆ ಜಮ್ಮು-ಕಾಶ್ಮೀರ ಮತ್ತು ರಾಜಸ್ಥಾನಗಳಲ್ಲಿ ಲಘು ಭೂಕಂಪನಗಳು ನಡೆದಿರುವ ವರದಿಗಳು ಬಂದಿವೆ.

ಸೋಮವಾರ ಅಪರಾಹ್ನ 3.19ರ ಹೊತ್ತಿಗೆ ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿರುವ ಈ ಭೂಕಂಪನ ಜಮ್ಮು-ಕಾಶ್ಮೀರದ ಶ್ರೀನಗರ ಮತ್ತು ಜಮ್ಮು ನಗರಗಳಲ್ಲಿ ಹಾಗೂ ರಾಜಸ್ಥಾನದ ಜೈಪುರದಲ್ಲಿ ಅನುಭವಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪನ ಶ್ರೀನಗರ ಮತ್ತು ಇತರ ಪ್ರದೇಶಗಳಲ್ಲಿ ದಾಖಲಾಗಿದೆ ಎಂದು ಸ್ಥಳೀಯ ಹವಾಮಾನ ಕಚೇರಿಯ ನಿರ್ದೇಶಕಿ ಸೋನಮ್ ಲೋಟಸ್ ಖಚಿತಪಡಿಸಿದ್ದಾರೆ.

ಕಡಿಮೆ ತೀವ್ರತೆಯನ್ನು ಹೊಂದಿದ್ದ ಈ ಭೂಕಂಪನದ ಕೇಂದ್ರ ಬಿಂದು ಅಫಘಾನಿಸ್ತಾನದಲ್ಲಿರುವ ಹಿಂದೂಖುಷ್ ಪ್ರದೇಶ. ಇಲ್ಲಿಂದ ಉತ್ತರಕ್ಕೆ 36.5 ಡಿಗ್ರಿ ಅಕ್ಷಾಂಶ ರೇಖೆಯಲ್ಲಿ ಹಾಗೂ ಪೂರ್ವಕ್ಕೆ 17.9 ರೇಖಾಂಶದಲ್ಲಿ ಭೂಕಂಪನ ನಡೆದಿದೆ. ಘಟನೆಯಿಂದ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ಇದುವರೆಗೆ ವರದಿಗಳು ಬಂದಿಲ್ಲ.

ಉತ್ತರ ಪಾಕಿಸ್ತಾನ ಮತ್ತು ದೆಹಲಿಯಲ್ಲೂ ಲಘು ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ಪ್ರಮಾಣ 3.2ರಷ್ಟು ದಾಖಲಾಗಿದೆ.

ಕಳೆದ ಸೋಮವಾರ (ಮಾರ್ಚ್ 14) ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ 3.3 ತೀವ್ರತೆಯ ಭೂಕಂಪನ ವರದಿಯಾಗಿತ್ತು. ಅಂದು ಕೂಡ ಅಪರಾಹ್ನ 2.31ಕ್ಕೆ ಇದು ನಡೆದಿತ್ತು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ವೀಕೆಂಡ್ ನಲ್ಲಿ ಬೆಂಗಳೂರಿಗೆ ಮಳೆ ಬರುತ್ತಾ, ಇಂದಿನ ಹವಾಮಾನ ವರದಿ

ವರ್ಷದ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಹೆಡ್‌ಕಾನ್‌ಸ್ಟೇಬಲ್‌ ಕ್ವಾಟ್ರಸ್‌ನಲ್ಲೇ ಆತ್ಮಹತ್ಯೆ

ಅತ್ಯಾಚಾರ ಪ್ರಕರಣ: ಇದೇ 30ರಂದು ಪ್ರಜ್ವಲ್ ರೇವಣ್ಣಗೆ ಜಾಮೀನಾ, ಜೈಲಾ, ಮಹತ್ವದ ತೀರ್ಪು

ಲೈವ್‌ನಲ್ಲಿ ವರದಿ ಮಾಡುತ್ತಿರುವಾಗಲೇ ಪ್ರವಾಹದಲ್ಲಿ ಕೊಚ್ಚಿ ಹೋದ ಪಾಕ್‌ ವರದಿಗಾರ, Viral Vdeo

ಶಾಸಕರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವಾಗಲೇ ರಮ್ಮಿ ಆಡುತ್ತಾ ಕೂತಾ ಉಪ ಅರಣ್ಯ ಸಂರಕ್ಷಣಾಧಿಕಾರಿ

Show comments