Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಮುಗಿದರೂ ಎಚ್ಚರಿಕೆ ಮರೆಯಬಾರದು

ಲಾಕ್ ಡೌನ್ ಮುಗಿದರೂ ಎಚ್ಚರಿಕೆ ಮರೆಯಬಾರದು
ಬೆಂಗಳೂರು , ಶುಕ್ರವಾರ, 4 ಜೂನ್ 2021 (09:33 IST)
ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ವಾರಕ್ಕೆ ಲಾಕ್ ಡೌನ್ ವಿಸ್ತರಿಸಿದೆ. ಆದರೆ ಒಂದು ವಾರದ ಬಳಿಕ ಅನ್ ಲಾಕ್ ಮಾಡಿದರೂ ಮೈಮರೆಯುವಂತಿಲ್ಲ.


ಇಷ್ಟು ದಿನ ಲಾಕ್ ಡೌನ್ ಅನುಭವಿಸಿ, ಈಗ ಅನ್ ಲಾಕ್ ಮಾಡಿದ ತಕ್ಷಣ ಹೊರ ಹೋಗಲು ಜನರಿಗೆ ಅತಿಯಾದ ಉತ್ಸಾಹವಿರುವುದು ಸಹಜ. ಹೇಗಿದ್ದರೂ ಕೊರೋನಾ ಕಡಿಮೆಯಾಗಿದೆ ಎಂಬ ಉಡಾಫೆಯಲ್ಲಿ ಮೈಮರೆತರೆ ಮತ್ತೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ.

ಹೀಗಾಗಿ ಲಾಕ್ ಡೌನ್ ಮುಗಿಯಿತೆಂದು ಅತಿಯಾದ ಓಡಾಟ, ಸುರಕ್ಷತೆ ಮರೆತರೆ ಮತ್ತೆ ಮನೆಯೊಳಗೇ ಕೂರುವ ಪರಿಸ್ಥಿತಿ ಬಂದೀತು. ಎಲ್ಲವನ್ನೂ ಸರ್ಕಾರಗಳೇ ಮಾಡಲು ಸಾಧ‍್ಯವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಮುಖ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲ್ಯಾಕ್ ಫಂಗಸ್ ಬಾರದಂತೆ ತಡೆಯಲು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ