Select Your Language

Notifications

webdunia
webdunia
webdunia
webdunia

ತನ್ನ ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳದ ಮೊಯ್ಲಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬಿಎಸ್ ವೈ

ತನ್ನ ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳದ ಮೊಯ್ಲಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬಿಎಸ್ ವೈ
ಚಿಕ್ಕಬಳ್ಳಾಪುರ , ಶನಿವಾರ, 26 ಜನವರಿ 2019 (06:29 IST)
ಚಿಕ್ಕಬಳ್ಳಾಪುರ : ಕೇಂದ್ರ ಸಂಸದನಾಗಿ ಅವನಿಗೆ ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.


ನಗರದಲ್ಲಿ ಬರ ಸಮೀಕ್ಷೆ ಬಳಿಕ ಮಾತನಾಡಿದ ಅವರು, ‘ವೀರಪ್ಪ ಮೊಯ್ಲಿಗೆ ಒಬ್ಬ ಸಂಸದನಾಗಿ, ಮಾಜಿ ಮುಖ್ಯಮಂತ್ರಿ ತನ್ನ ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳಲು ಬಂದಿಲ್ಲ. ಬರಗಾಲದ ಬಗ್ಗೆ ಸರ್ಕಾರದ ಗಮನಕ್ಕೆ ಸಮಸ್ಯೆ ತರಲಿ’ ಎಂದು ಟೀಕಿಸಿದ್ದಾರೆ.


‘ಸುಮ್ಮನೇ ಕೇಂದ್ರ ಸರ್ಕಾರದ ವಿರುದ್ಧ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದನ್ನು ಮೊದಲು ಬಿಡಲಿ. ಮೊಯ್ಲಿ ಅವರು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಪ್ರಧಾನಿಯವರಿಗಾಗಲಿ, ಕೇಂದ್ರ ಸರ್ಕಾರದ ಗಮನಕ್ಕಾಗಲಿ ತಂದಿದ್ದಾರಾ? ಸಂಸದರಾಗಿ ಎಷ್ಟು ಬಾರಿ ಕ್ಷೇತ್ರದಲ್ಲಿ ಬರ ಪರಿಶೀಲನೆ ಮಾಡಿದ್ದಾರೆ’ ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನಿಖಿಲ್ ರಲ್ಲಿ ಶಾರುಖ್, ಸಲ್ಮಾನ್ ಮೀರಿಸುವಷ್ಟು ಅಭಿನಯವಿದೆ ಎಂದ ಸಚಿವ!