Select Your Language

Notifications

webdunia
webdunia
webdunia
webdunia

ಕಳಸಾ ಬಂಡೂರಿ ಹೋರಾಟಕ್ಕೆ ಇಂದಿಗೆ ಮೂರು ವರ್ಷ

ಕಳಸಾ ಬಂಡೂರಿ ಹೋರಾಟಕ್ಕೆ ಇಂದಿಗೆ ಮೂರು ವರ್ಷ
ಗದಗ , ಸೋಮವಾರ, 16 ಜುಲೈ 2018 (11:27 IST)
ರಾಜ್ಯಾದ್ಯಂತ ಹೋರಾಟದ ಕಿಚ್ಚು ಹಚ್ಚಿಸಿರುವ ಕಳಸಾ ಬಂಡೂರಿ ಹೋರಾಟಕ್ಕೆ ಇಂದಿಗೆ ಮೂರು ವರ್ಷಗಳು ತುಂಬಿದವು. ಕುಡಿಯುವ ನೀರಿಗಾಗಿನ ಹೋರಾಟಕ್ಕೆ ಸ್ಪಂದನೆ ಸಿಗದೇ ಇರುವುದರಿಂದ ಹೋರಾಟದ ಕಿಚ್ಚು ಇಂದಿನಿಂದ ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ.

ಮಹದಾಯಿ ಕಳಸಾ ಬಂಡೂರಿ ಹೋರಾಟ ಇಂದಿಗೆ ಮೂರು ವರ್ಷ ಪೂರೈಸಿದೆ. ನಾಲ್ಕನೆ ವರ್ಷಕ್ಕೆ ಹೋರಾಟ ಮುಂದುವರಿದೆ. ಕುಡಿಯುವ ನೀರಿನ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕ್ರಮದಿಂದ ರೋಸಿ ಹೋಗಿರುವ ರೈತರು ಮೂರು ವರ್ಷ ತುಂಬುತ್ತಿರುವ  ಹಿನ್ನೆಲೆ ವಿನೂತನ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ.

10 ಸಾವಿರಕ್ಕೂ ಹೆಚ್ಚು ಜನರಿಂದ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ವಿವಿಧ ಹಿಂದೂಪರ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರಿಂದ ದಯಾಮರಣಕ್ಕೆ ಅರ್ಜಿ ಸಲ್ಲಿಕೆಯಾಗಲಿವೆ. ಮಹದಾಯಿ ಮತ್ತು ಕಳಸಾ ಬಂಡೂರಿ ಸಮಸ್ಯೆ ಇತ್ಯರ್ಥಪಡಿಸಲು ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಕೇಪ್ ಆಗಲು ಯತ್ನಿಸಿದ ಆರೋಪಿಗೆ ಆಗಿದ್ದೇನು ಗೊತ್ತಾ?