Select Your Language

Notifications

webdunia
webdunia
webdunia
webdunia

ಭಾರತಕ್ಕೆ ದುಡ್ಡಿನ ಅಗತ್ಯವಿಲ್ಲ: ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಗೆ ಕಪಿಲ್ ದೇವ್ ತಿರುಗೇಟು

ಭಾರತಕ್ಕೆ ದುಡ್ಡಿನ ಅಗತ್ಯವಿಲ್ಲ: ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಗೆ ಕಪಿಲ್ ದೇವ್ ತಿರುಗೇಟು
ಮುಂಬೈ , ಶುಕ್ರವಾರ, 10 ಏಪ್ರಿಲ್ 2020 (09:31 IST)
ಮುಂಬೈ: ಕೊರೋನಾ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಕ್ರಿಕೆಟ್ ಸರಣಿ ನಡೆಯಲಿ ಎಂಬ ಮಾಜಿ ಕ್ರಿಕೆಟಿಗ ಶೊಯೇಬ್ ಅಖ್ತರ್ ಹೇಳಿಕೆಗೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ.


‘ಭಾರತಕ್ಕೆ ಸದ್ಯಕ್ಕೆ ಹಣದ ಅಗತ್ಯವಿಲ್ಲ. ಅಂತಹ ಸರಣಿ ನಡೆಯುವುದೇ ಬೇಕಿಲ್ಲ. ಅಷ್ಟಕ್ಕೂ ಕ್ರಿಕೆಟಿಗರ ಪ್ರಾಣಕ್ಕೆ ಯಾಕೆ ಕುತ್ತು ತರಬೇಕು? ಹಾಗಾಗಿ ಮನೆಯಲ್ಲೇ ಆರಾಮವಾಗಿ ಕೂರಿ’ ಎಂದು ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ.

ಭಾರತದಲ್ಲಿ ಅಧಿಕಾರಿಗಳು ಕೊರೋನಾ ನಿಯಂತ್ರಣಕ್ಕೆ ತಕ್ಕ ಕ್ರಮ ಕೈಗೊಳ್ಳುತ್ತಿದ್ದಾರೆ. ಕ್ರಿಕೆಟ್ ಸರಣಿ ಆಯೋಜಿಸಿ ಎಂದು ಹಿಂದೆ ಕೂತುಕೊಂಡು ಹೇಳುವುದು ಸುಲಭ. ಅಂತಹ ಯಾವುದೇ ಸಲಹೆ ನಮಗೆ ಬೇಕಿಲ್ಲ ಎಂದು ಕಪಿಲ್ ದೇವ್ ಖಡಕ್ ಆಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಪರಿಹಾರಕ್ಕೆ ಹಣ ಸಂಗ್ರಹಿಸಲು ಇಂಡೋ-ಪಾಕ್ ಕ್ರಿಕೆಟ್ ಆಡೋಣ!