ಸ್ಯಾಂಡಲ್ ವುಡ್ನ ಗೀತ ಸಾಹಿತಿ ಕವಿರಾಜ್ ಅವರ ಚೊಚ್ಚಲ ಕೂಸು ಮದುವೆ ಮಮತೆಯ ಕರೆಯೋಲೆ ಸಿನಿಮಾ ಇವತ್ತು ತೆರೆಗೆ ಅಪ್ಪಳಿಸಲಿದೆ. ಜೊತೆ ಜೊತೆಯಲ್ಲಿ ನವಗ್ರಹ, ಬುಲ್ ಬುಲ್ನಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ದಿನಕರ್ ತೂಗುದೀಪ ಅವರು `ಮದುವೆಯ ಮಮತೆಯ ಕರೆಯೋಲೆ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಮೈಸೂರು ಮೂಲದ ಸೂರಜ್ ಎನ್ನುವ ಹೊಸ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಐದು ಸಾವಿರ ಮಂದಿ ಯುವ ಕಲಾವಿದರಲ್ಲಿ ನಾಯಕನಾಗಿ ಸೂರಜ್ ಆಯ್ಕೆಯಾಗಿರುವುದು ವಿಶೇಷ. ಇನ್ನು ನಾಯಕಿಯಾಗಿ ಸ್ಯಾಂಡಲ್ ವುಡ್ನ ಕ್ಯೂಟ್ ಬೇಬಿ ಅಮೂಲ್ಯ ಅವರು ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಎರಡು ಕುಟುಂಬದ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆಯಂತೆ. ಪ್ರೀತಿ ಎರಡನೇ ಭಾಗವಾಗಿದ್ದರೂ ಮಾನವೀಯ ಮೌಲ್ಯವನ್ನು ಜೀವನ ಎಷ್ಟು ಸುಂದರ ಎನ್ನುವುದನ್ನು ಈ ಸಿನಿಮಾ ಹೇಳುತ್ತಂತೆ.
ಬಹುತಾರಾಗಣವಿರುವ ಈ ಸಿನಿಮಾದಲ್ಲಿ ಅನಂತ್ ನಾಗ್ ಒಂದು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರಂತೆ. ಇನ್ನುಳಿದಂತೆ ಅಚ್ಯುತ್ ರಾವ್, ಸುಂದರ್ ಪಾಪ ಪಾಂಡು ಧಾರಾವಾಹಿ ಖ್ಯಾತಿಯ ಶಾಲಿನಿ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಂತಾದವರು ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ಈಗಗಾಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.